Select Your Language
ಒಂದೆ ಕುಲ ಒಂದೆ ನೆಲ
ಭಾರತಾಂಬೆಯ ಮಡಿಲ ಮಕ್ಕಳುನಮ್ಮದೊಂದೇ ಕುಲವುಜಾತಿ ನೀತಿಯ ಭೇವಿವಿಲ್ಲವುನಮ್ಮದೊಂದೇ ಜಾತಿಯುನಮ್ಮದೊಂದೇ ನೀತಿಯುಹಿಂದು ಮುಸ್ಲಿಮ್ ಕ್ರೈಸ್ತ ಸಿಖ್ಖರುಜೈನ್ ಬೌದ್ಧರು ಎಲ್ಲಿರೊಒಂದೇ ತಾಯಿಯ ಮಕ್ಕಳುನಮ್ಮ ಮಣ್ಣಿನ ಮಕ್ಕಳುಒಂದೆ ರಕ್ತವು ಒಂದೆ ಪ್ರಾಣವು ಒಂದೆ ತನವು ನಮ್ಮದುಒಂದೆ ಮನವು ನಮ್ಮದುಒಂದೆ ಗಾಳಿ ಒಂದೆ ನೀರುಒಂದೆ ಮಣ್ಣು ನಮ್ಮದುಒಂದೆ ಧ್ಯೇಯ ಒಂದೇ ತತ್ವಒಂದೆ ಉಸಿರು ನಮ್ಮದುಸಾಕು ಘರ್ಷಣೆ ಸತ್ಯ ಘೋಷಣೆಯಿಂದ ನಮಗೆ ಮುಕ್ತಿಯು ಒಂದೆ ಸುಖವು ನಮ್ಮದುಒಂದೆ ನೋವು ನಮ್ಮದುಒಂದೆ ಬಲವು ಒಂದೆ ಛಲವುಒಂದೆ ಗುರಿಯು ನಮ್ಮದುಭಾಷೆ ಧರ್ಮ ಹಲವು ಇದ್ದರುಹೃದಯ ಭಾಷೆ ನಮ್ಮದುಮನುಜ ಧರ್ಮ ನಮ್ಮದುರಾಜ್ಯ ಹಲವು ಇದ್ದರೇನುನಾಡು ಒಂದೇ ನಮ್ಮದುಬೀಡು ಒಂದೆ ನಮ್ಮದುಶ್ರೇಷ್ಠ ಕವಿಗಳ ಧರ್ಮವೀರರಪಡೆದ ನಾಡು ನಮ್ಮದುಪುಣ್ಯಭೂಮಿ ನಮ್ಮದು ದೇಶದೆಳ್ಗೆಗೆ ನಾಡ ಸೇವೆಗೆಹಗಲು ರಾತ್ರಿಯು ದುಡಿಯುವಾಸರ್ವತ್ಯಾಗವ ಮಾಡುವಾಏಕಕಂಠದಿ ಏಕನಾದದಿ ಮೊಳಗುವಾದುಷ್ಟ ಶಕ್ತಿಯ ತುಳಿಯುವಾ ಸತ್ಯ ಶಾಂತಿಯ ಧರ್ಮನೀತಿಯಐಕ್ಯದಿಂದಲಿ ಬಾಳುವಾ-
ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ