Webdunia - Bharat's app for daily news and videos

Install App

ಹೊಸಬರ ಚಿತ್ರವೆಂದು ಮುಖ ಕಹಿ ಮಾಡಬೇಡಿ

Webdunia
ಶನಿವಾರ, 5 ನವೆಂಬರ್ 2016 (10:18 IST)
ಬೆಂಗಳೂರು:  ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಹೊಸಬರು ಎಂಟ್ರಿ ಕೊಡುತ್ತಿದ್ದಾರೆ. ಹೊಸಬರು ಮಾಡುವ ಕೆಲವು ಚಿತ್ರಗಳು ಎಂದರೆ ಅಸಡ್ಡೆ ಮಾಡುವಂತಿಲ್ಲ.

ಯಾಕೆಂದರೆ ಹೊಸಬರ ಸಿನಿಮಾದಲ್ಲಿ ಹೊಸತನವಿರುತ್ತದೆ. ಹೊಸ ಕತೆಗಳಿರುತ್ತವೆ. ವಿಶೇಷವಾಗಿ ಇಲ್ಲಿ ಹೀರೋಗಳ ಆರ್ಭಟ, ವಿಲನ್ ಗಳ ಅಬ್ಬರವಿರುವುದಿಲ್ಲ. ಹೀರೋಗಾಗಿಯೇ ಮಾಡುವ ಕತೆಗಳಲ್ಲ. ಹಾಗಾಗಿ ಇಲ್ಲಿ ಕತೆಗಳೇ ಹೀರೋಗಳಾಗಿರುತ್ತಾರೆ. ಹಾಗಾಗಿ ಹೊಸಬರ ಸಿನಿಮಾಗಳು ಇಷ್ಟವಾಗುತ್ತವೆ.

ಎರಡು ವಾರಗಳ ಹಿಂದೆ ಬಿಡುಗಡೆಯಾದ ರಾಮಾ ರಾಮಾ ರೇ ಚಿತ್ರ ಇಷ್ಟವಾಗಿದ್ದೂ ಇದೇ ಕಾರಣಕ್ಕೆ. ಇಲ್ಲಿ ಪಾತ್ರವರ್ಗದವರ ಸಂಖ್ಯೆ ಕಡಿಮೆ. ಇನ್ನೂ ಹೆಸರು ಮಾಡಿರದ ಆದರೆ ಅಭಿನಯದಲ್ಲಿ ಪಳಗಿದವರೇ ಅಭಿನಯಿಸಿದ ಕಾರಣಕ್ಕೆ ಅದು ಇಷ್ಟವಾಗಿತ್ತ.

ನಿನ್ನೆ ಬಿಡುಗಡೆಯಾದ ಕಹಿ ಎನ್ನುವ ಹೊಸಬರ ಸಿನಿಮಾವೂ ಮುಖ ಕಹಿ ಮಾಡಿಕೊಳ್ಳುವಷ್ಟು ಕೆಟ್ಟ ಸಿನಿಮಾವಲ್ಲ. ಹೊಸಬರ ಪ್ರಯತ್ನಕ್ಕೊಂದು ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. ಇದು ಕೇವಲ ನಾಲ್ಕು ಕಥಾಪಾತ್ರಗಳ ನಡುವೆ ಸುತ್ತುವ ಕತೆ.

ಗೌಜಿ ಗದ್ದಲಗಳಿಲ್ಲ, ಮರು ಸುತ್ತುವ ದೃಶ್ಯಗಳಿಲ್ಲ. ಆದರೂ ನಾಲ್ಕು ಜನರೊಳಗೇ ಸುತ್ತುವ ಕತೆ. ಒಬ್ಬ ಡ್ಯಾನ್ಸರ್, ಒಬ್ಬ ಡ್ರಗ್ಸ್ ಮಾರುವವ, ಇನ್ನೊಬ್ಬ ಸೈಕೋ ಮತ್ತೊಬ್ಬಳು  ಲೇಖಕಿಯ ಸುತ್ತ ಹಣೆದಿರುವ ಕತೆ. ಸಿನಿಮಾ ಎಲ್ಲೂ ಬಿಗಿ ಕಳೆದುಕೊಳ್ಳದಂತೆ ನೋಡಿಕೊಂಡಿದ್ದಾರೆ ನಿರ್ದೇಶಕ ಅರವಿಂದ ಶಾಸ್ತ್ರಿ.

ಅಭಿನಯದಲ್ಲೂ ಸೂರಜ್ ಗೌಡ, ಕೃಷಿ ತಾಪಂಡ, ಹರಿ ಶರ್ಮಾ ಸೈ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಆಸೆ ಇದೆ, ದುರಾಸೆ ಇದೆ, ಹಠವಿದೆ, ಕೆಟ್ಟ ಚಟಗಳ ನರಕ ದರ್ಶನವಿದೆ. ಒಟ್ಟಾರೆ ಒಂದು ವಾಸ್ತವಿಕ ಸಿನಿಮಾ ನೋಡಲು ಬಯಸುವವರು ಒಮ್ಮೆ ನೋಡಬಹುದಾದ ಸಿನಿಮಾವಿದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments