Webdunia - Bharat's app for daily news and videos

Install App

ಹತ್ತರಲ್ಲಿ ಹನ್ನೊಂದು ಈ ಜೋಕಾಲಿ

Webdunia
ಈಗಾಗಲೇ ಸಾಕಷ್ಟು ಚಿತ್ರಗಳು ಬಂದ ಮಾರ್ಗದಲ್ಲೇ ಜೋಕಾಲಿಯೂ ಬಂದಿದೆ. ಹಾಗೆ ಬಂದು ಹೀಗೆ ಹೋಗುವ ಚಿತ್ರಗಳ ಪಟ್ಟಿಯಲ್ಲಿ ಇದೂ ಒಂದು. ನಾಯಕ ಚಿತ್ರ ಮಂದಿರದಲ್ಲಿ ಟಿಕೆಟ್ ಹರಿಯುವ ಹುಡುಗ, ನಾಯಕಿ ಊರ ರಾಜಕಾರಣಿಯ ತಂಗಿ. ಇವರ ನಡುವೆ ಅಂಕುರವಾಗುವ ಪ್ರೇಮಕ್ಕೆ ಹೆಣೆದ ಕಥೆಯೇ ಜೋಕಾಲಿ.

ಇಲ್ಲಿ ಸಾಮಾನ್ಯವಾಗಿ ಚಿತ್ರವೊಂದಕ್ಕೆ ಇರುವ ಎಲ್ಲಾ ಅಂಶಗಳೂ ಇವೆ. ಆದರೆ ಹಳೆ ಮದ್ಯ ಹೊಸ ಬಾಟಲಿ ಅನ್ನುವ ಹಾಗಿದೆ. ಚಿತ್ರಕಥೆಯಲ್ಲೂ ಲವಲವಿಕೆ ಇಲ್ಲ. ಉಲ್ಲಾಸ ಮೂಡಿಸುವ ಸನ್ನಿವೇಶ ಇಲ್ಲ. ಅಭಿನಯದಲ್ಲೂ ಅಂಥ ಹೇಳಿಕೊಳ್ಳುವ ಉತ್ತೇಜನ ಇಲ್ಲ. ನಿರ್ದೇಶನ ಓಕೆ. ಒಟ್ಟಾರೆ ಇಲ್ಲಿ ಪ್ರೀತಿಯ ಜತೆ ಕೌಟುಂಬಿಕ ಕಿತ್ತಾಟ, ಎರಡು ಕುಟುಂಬದ ನಡುವಿನ ಸಂಘರ್ಷ ಚಿತ್ರದಲ್ಲಿ ಕಾಣ ಸಿಗುತ್ತದೆ.

ನಿರ್ದೇಶಕ ದೀಪಕ್ ತಮಗಿರುವ ಮಿತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರಕಥೆಗಿರುವ ಬಲಕ್ಕೆ ಇನ್ನೂ ಹೆಚ್ಚಿನದನ್ನು ಮಾಡಲು ಸಾಧ್ಯವೇ ಇಲ್ಲ. ನಟ ಗೌರಿ ಶಂಕರ್ ತಮ್ಮ ಪಾತ್ರಕ್ಕೆ ಸಾಕಷ್ಟು ನ್ಯಾಯ ಒದಗಿಸಿದ್ದಾರೆ. ಲವಲವಿಕೆಯಿಂದ ಅಭಿನಯಿಸಿದ್ದಾರೆ. ನಾಯಕಿ ಉದಯತಾರಾ ಸಹ ಪರವಾಗಿಲ್ಲ.

ರಂಗಾಯಣ ರಘು ಬಹಳ ದಿನಗಳ ನಂತರ ಒಂದು ಕೆಟ್ಟ ಪಾತ್ರ ಮಾಡಿದ್ದಾರೆ. ರವಿಕಾಳೆ, ಮುನಿ, ಉಮಾಶ್ರೀ ತಮ್ಮ ನೈಜ ಅಭಿನಯ ಮೆರೆಯುವಲ್ಲಿ ಸಫಲರಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬುಲೆಟ್ ಪ್ರಕಾಶ್ ಸಹ ಹಾಸ್ಯ ಮರೆತವರಂತೆ ಅಭಿನಯಿಸಿದ್ದಾರೆ. ಇಷ್ಟು ಸಾಕು. ಬೇಕಾದಷ್ಟು ಸಮಯ ಇದೆ ಎಂದಾದಲ್ಲಿ ಚಿತ್ರ ನೋಡಿ ಬರಬಹುದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?