Webdunia - Bharat's app for daily news and videos

Install App

ಸಂಚಾರಿ: ಸಂಗೀತ ಬಿಟ್ಟರೆ ಅಂಥಾದ್ದೇನಿಲ್ಲ

Webdunia
MOKSHA
ಸಂಚಾರಿಯನ್ನು ನೋಡಲು ಹೋದರೆ ಒಂದೆರಡು ಹಾಡು ರಂಜಿಸುತ್ತದೆ ಅನ್ನೋದು ಬಿಟ್ಟರೆ ಪರಚಿ ಹಾಕುವ ಸನ್ನಿವೇಶಗಳು, ಅಸಂಬದ್ಧ ಕಥೆ, ಅಭಿನಯ ಬಾರದ ತಾರಾಗಣದ ನಡುವೆ ಚಿತ್ರ ಮ್ಯಾರಾಥಾನ್ ಓಟ ಓಡುತ್ತದೆ.

ಚಿತ್ರ ನಿರ್ಮಿಸುವವರಿಗೆ ಆಟ, ನೋಡುವವರಿಗೆ ಪ್ರಾಣ ಸಂಕಟ ಅನ್ನದೆ ವಿಧಿಯಿಲ್ಲ. ಲಕ್ಷ್ಮಯ್ಯ, ರಾಮಪ್ಪ ಹಾಗೂ ಪ್ರಭಾಕರ್ ಮೂವರು ನಿರ್ಮಿಸಿದ್ದು, ಪ್ರತಿಯೊಬ್ಬರೂ ನಷ್ಟವನ್ನು ಶೇ.33ರಷ್ಟು ಮಾತ್ರ ಹೊರಬೇಕಾಗುತ್ತದೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸಂಗತಿ. ಕಿರಣ್ ಗೋವಿ ಬಹಳ ಪ್ರಯತ್ನದ ನಂತರವೂ ಅಂತಿಮವಾಗಿ ಸೋತಿದ್ದಾರೆ.

ಚಿತ್ರದ ನಾಯಕ ಹಾಗೂ ನಾಯಕಿ ಇಬ್ಬರೂ ಮಾತಿನ ಜತೆ ಅಭಿನಯವನ್ನೂ ಮರೆತಿದ್ದಾರೆ. ಕಥೆಯ ಬಗ್ಗೆ ಕೇಳುವುದೇ ಬೇಡ. ನಾಯಕ ಸುಪಾರಿ ಕಿಲ್ಲರ್. ಹುಡುಗಿಯರಿಂದ ಯಾವಾಗಲೂ ಮಾರು ದೂರ ಇರುವಾತ. ಹೀಗಿದ್ದಾಗ್ಯೂ ಒಬ್ಬ ಹುಡುಗಿ ಎಲ್ಲಾ ಸಿನಿಮಾಗಳಂತೆ ಇಲ್ಲೂ ನಾಯಕ ಮನ ಕದಿಯುತ್ತಾಳೆ. ಅಲ್ಲಿಂದ ಕತ್ತಿ ಮಚ್ಚು ಬದಿಗಿಡುವ ನಾಯಕ ಪ್ಯಾರ್, ಇಷ್ಕ್, ಮೊಹಬ್ಬತ್ ಅನ್ನಲು ಆರಂಭಿಸುತ್ತಾನೆ. ಹುಡುಗಿಯ ಸುದ್ದಿಗೆ ಬಂದವರನ್ನು ಮಾತ್ರ ಚಚ್ಚಿ ಬಿಸಾಕುತ್ತಾನೆ.

ನಾಯಕ ರಾಜ್‌ಗೆ ಹೋಲಿಸಿದರೆ ಬಿಯಂಕಾ ದೇಸಾಯಿ ಅಭಿನಯವೇ ವಾಸಿ. ರಾಜ್ ಒಂದೋ ನಾಯಕನಟನಾಗುವ ಕನಸು ಬಿಡಬೇಕು. ಇಲ್ಲವೇ ಮೊದಲು ಅಭಿನಯ ಕಲಿಯಬೇಕು. ಸಂಭಾಷಿಸುವಾಗ ಕೊಂಚ ಭಾವನೆ ಅನ್ನೋದನ್ನಾದರೂ ಮುಖದಲ್ಲಿ ವ್ಯಕ್ತಪಡಿಸೋದನ್ನು ಕಲಿಯಬೇಕು. ಇಲ್ಲವಾದರೆ ಪ್ರೇಕ್ಷಕರಿಗೆ ಖಂಡಿತಾ ಶಿಕ್ಷೆಯೇ ಸರಿ.

ಸಂಗೀತ ನಿರ್ದೇಶಕ ಅರ್ಜುನ್ ಮಾತ್ರ ಈ ಚಿತ್ರದ ಏಳಿಗೆಗಾಗಿ ಏಕಾಂಗಿ ಹೋರಾಟ ಮಾಡಿದ್ದಾರೆ. ಇವರ ಸಂಗೀತ ಚಿತ್ರದುದ್ದಕ್ಕೂ ಕೇಳುವಂತಿದೆ ಅನ್ನೋದು ಬಿಟ್ಟರೆ, ಗೆಲ್ಲಿಸಲು ಕೇವಲ ಇದು ಸಾಕಾಗದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments