Webdunia - Bharat's app for daily news and videos

Install App

ಬ್ರೇಕಿಂಗ್ ನ್ಯೂಸ್ ವಿಮರ್ಶೆ: ಲೋಕವೇ ಹೇಳಿದ ಮಾತಿದು

Webdunia
ಚಿತ್ರ: ಬ್ರೇಕಿಂಗ್ ನ್ಯೂಸ್
ತಾರಾಗಣ: ಅಜಯ್ ರಾವ್, ರಾಧಿಕಾ ಪಂಡಿತ್, ಅನಂತ್‌ನಾಗ್, ರಂಗಾಯಣ ರಘು
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಸ್ಟೀಫನ್ ಪ್ರಯೋಗ್
SUJENDRA

ನವಿರು ಪ್ರೇಮಕಥೆಗಳನ್ನೇ ಆರಿಸಿಕೊಳ್ಳುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚೆಗೆ ಸಾಮಾಜಿಕ ಸಮಸ್ಯೆಗಳನ್ನೇ ಮುಂದಿಡಲು ಯತ್ನಿಸುತ್ತಿದ್ದಾರೆ. ಅಂತಹ ಒಂದು ಯತ್ನ 'ಬ್ರೇಕಿಂಗ್ ನ್ಯೂಸ್'. ಅವರಿಲ್ಲಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ತೋರಿಸಲು ಹೊರಟಿದ್ದಾರೋ ಅಥವಾ ಬ್ರೇಕಿಂಗ್ ನ್ಯೂಸ್ ಕೊಡಬೇಕಾದ ಒತ್ತಡದಲ್ಲಿರುವ ಪತ್ರಕರ್ತರ ಮೇಲೆ ಸೇಡು ತೀರಿಸಿಕೊಂಡಿದ್ದಾರೋ ಎನ್ನುವುದು ಗೊತ್ತಾಗುತ್ತಿಲ್ಲ.

ಅರ್ಜುನ್ (ಅಜಯ್ ರಾವ್) ಖಾಸಗಿ ಟಿವಿ ಚಾನೆಲ್‌ವೊಂದರ ರಿಪೋರ್ಟರ್. ಹಿಂದೆ ಮುಂದೆ ನೋಡದೆ ಬ್ರೇಕಿಂಗ್ ನ್ಯೂಸ್ ಕೊಡುವ ಧಾವಂತ ಆ ಟಿವಿ ಚಾನೆಲ್‌ಗೆ. ಅದಕ್ಕೆ ಹೊಂದುವಂತಹ ನೌಕರರಿಗೆ ಮಾತ್ರ ಅಲ್ಲಿ ಕೆಲಸ. ಮಸಾಲೆ ಸುದ್ದಿ ಕೊಡಲು ಸಾಧ್ಯವಾಗದೇ ಹೋದರೆ ಗೇಟ್ ಪಾಸ್.

ಹೀಗಿರುವಾಗ ಅರ್ಜುನ್ ಎಕ್ಸ್‌ಕ್ಲೂಸಿವ್ ಸುದ್ದಿ ಕೊಡುವಲ್ಲಿ ಎಡವುತ್ತಾನೆ. ಕೆಲಸವನ್ನೂ ಕಳೆದುಕೊಳ್ಳುತ್ತಾನೆ. ಆದರೆ ಲೋಕಾಯುಕ್ತ ಸೋಮಶೇಖರ್ (ಅನಂತ್ ನಾಗ್) ಪುತ್ರಿ ಶ್ರದ್ಧಾ (ರಾಧಿಕಾ ಪಂಡಿತ್) ಅಪಹರಣ ಕೇಸ್‌ನ ಸುದ್ದಿ ಕೊಡುವುದರಲ್ಲಿ ಈತನೇ ಮುಂದು. ಯಾರಿಗೂ ಈ ಸುದ್ದಿ, ಫಾಲೋ-ಅಪ್ ಸಿಗುವುದೇ ಇಲ್ಲ. ಇದಕ್ಕೆ ಕಾರಣ, ಅಪಹರಣದಲ್ಲಿ ಸ್ವತಃ ಅರ್ಜುನ್ ಪಾಲಿರುವುದು. ಈ ನಡುವೆಯೇ ಪ್ರೀತಿ ಹುಟ್ಟಿಕೊಂಡು ಕೊನೆಗೆ ಅವಾರ್ಡಿನಲ್ಲಿ ಲೀನವಾಗುತ್ತದೆ. ಇಂದು ಇಡೀ ಚಿತ್ರದ ಒಟ್ಟು ಕಥೆಯ ಸಾರಾಂಶ.

ಮೇಸ್ಟ್ರು ಕಥೆಯನ್ನೇನೋ ಚೆನ್ನಾಗಿಯೇ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಎಲ್ಲೋ ಹಳಿ ತಪ್ಪಿರುವುದು ಸ್ಪಷ್ಟ. ನಿರೂಪನೆಯಲ್ಲಿ ಯಾವ ಹೊಸತನವೂ ಕಾಣುವುದಿಲ್ಲ. ಎಲ್ಲವೂ ಪ್ರೇಕ್ಷಕರ ನಿರೀಕ್ಷೆಯಂತೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ, ನಾಗತಿಹಳ್ಳಿ ಶೈಲಿಯೇ ಮಾಯವಾಗಿದೆ. ಅಂತಹ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ನಿರಾಸೆ.

ಇಡೀ ಚಿತ್ರದ ಅಚ್ಚರಿ ರಾಧಿಕಾ ಪಂಡಿತ್. ಅವರು ಪ್ರೀತಿಯಿರಲಿ, ಕರಾಟೆಯಿರಲಿ, ಎಲ್ಲಾ ಕಡೆ ಇಷ್ಟವಾಗುತ್ತಾರೆ. ಅಜಯ್ ರಾವ್ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಲೋಕಾಯುಕ್ತರ ಪಾತ್ರದಲ್ಲಿ ಅನಂತ್ ನಾಗ್ ಸಾದಾ ಸೀದಾ. ಇಂತಹ ಪಾತ್ರ ಅವರಿಗೆ ಹೊಸತೂ ಅಲ್ಲವಾಗಿರುವುದರಿಂದ, ಅದ್ಭುತವೇನಿಲ್ಲ. ಆದರೆ ರಂಗಾಯಣ ರಘು ರಾಜಕಾರಣಿಯಾಗಿ ಟೋಪಿಯಡಿಯಲ್ಲಿ ಮರುಳು ಮಾಡುತ್ತಾರೆ.

ಸ್ಟೀಫನ್ ಪ್ರಯೋಗ್ ಸಂಗೀತದ ಮಧುರ ಹಾಡುಗಳು ಗುಣುಗುವಂತಿವೆ. ಆದರೂ ಅವರ ಪ್ರಯೋಗ ಅಷ್ಟೇನೂ ಪ್ರಶಂಸಾರ್ಹವಲ್ಲ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

Show comments