Webdunia - Bharat's app for daily news and videos

Install App

ಪೊಲೀಸ್ ಕ್ವಾರ್ಟರ್ಸ್: ಎಲ್ಲರಿಗೂ ಸಲ್ಲುವ ಸುಂದರ ಚಿತ್ರ

Webdunia
MOKSHA
ಚಿತ್ರ: ಪೊಲೀಸ್ ಕ್ವಾರ್ಟರ್ಸ್
ತಾರಾಗಣ: ಅನೀಸ್ ತೇಜೇಶ್ವರ್, ಸೋನು, ದಿಲೀಪ್ ರಾಜ್, ಅವಿನಾಶ್
ನಿರ್ದೇಶನ: ಎ.ಎಂ.ಆರ್. ರಮೇಶ್
ಸಂಗೀತ: ಜೇಮ್ಸ್ ವಸಂತ

' ಮಿಂಚಿನ ಓಟ'ದ ತಪ್ಪನ್ನು ಸರಿಪಡಿಸಿಕೊಂಡಿರುವ ಎ.ಎಂ.ಆರ್. ರಮೇಶ್, ತಾನು ಈ ಹಿಂದೆ 'ಸೈನೈಡ್' ನಿರ್ದೇಶಿಸಿದವನು ಎಂಬುದನ್ನು ನೆನಪಿಸಿದ್ದಾರೆ. 'ಪೊಲೀಸ್ ಕ್ವಾರ್ಟರ್ಸ್' ಮೂಲಕ ಅವರು ಸಾಧನೆಯ ಮತ್ತೊಂದು ಮೆಟ್ಟಿಲೇರಿದ್ದಾರೆ.

ಈ ಚಿತ್ರ ಇಬ್ಬರು ಪ್ರೇಮಿಗಳ, ಎರಡು ಕುಟುಂಬಗಳ, ತಾಯಿ-ಮಗನ ಪ್ರೀತಿ, ಬಾಬ್ರಿ ಮಸೀದಿ ವಿವಾದವನ್ನು ಒಳಗೊಂಡಿದೆ. ಪ್ರೇಮಿಗಳು ಈ ಚಿತ್ರವನ್ನು ನೋಡಿದರೆ ಇದು ಪ್ರೀತಿಯ ಕತೆ, ಪೊಲೀಸ್ ಅಧಿಕಾರಿಗಳು ವೀಕ್ಷಿಸಿದರೆ ಅವರದೇ ಒಂದು ಕತೆ, ತಾಯಿ-ಮಗ ನೋಡಿದರೆ ಗೋಳಿನ ಕತೆ. ಹೀಗೆ ಪ್ರತಿಯೊಬ್ಬರ ಭಾವಕ್ಕೆ ತಕ್ಕಂತೆ ಈ ಚಿತ್ರ ಹೊಸ ಅರ್ಥ ಕೊಡುತ್ತಾ ಸಾಗುತ್ತದೆ.

1991 ರ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರದ ಕತೆ ಕನ್ನಡ ಚಿತ್ರರಂಗಕ್ಕೆ ಹೊಸದೆಂದೇ ಹೇಳಬಹುದು. ಕತೆ ತುಂಬಾನೆ ಚಿಕ್ಕದು, ಆದರೆ ಮಾಮೂಲಿ ಪ್ರೀತಿಯ ಕತೆ ಎಂದು ಹೇಳಲು ಸಾಧ್ಯವಿಲ್ಲ. ಚಿತ್ರದಲ್ಲಿ ಸಂದೇಶವೊಂದು ಸಾರಿ ಹೇಳುತ್ತದೆ.

60 ರ ದಶಕದಲ್ಲಿ ಪೊಲೀಸರ ಉಡುಪು ಹೇಗಿತ್ತು? 91ರ ದಶಕದಲ್ಲಿ ಬಾಬ್ರಿ ಮಸೀದಿ ಗಲಭೆ ನಡೆದಾಗ ವಾತವಾರಣ ಹೇಗಿತ್ತು ಎಂಬುದನ್ನು ಕೆಲವೇ ನಿಮಿಷಗಳಲ್ಲಾದರೂ ರಮೇಶ್ ಅದ್ಭುತವಾಗಿ ತೋರಿಸಿದ್ದಾರೆ. 1968, 1992 ಮತ್ತು 1999ರ ಪ್ರಮುಖ ಘಟನೆಗಳನ್ನು ಆಧರಿಸಿ ಅವರು ನಮ್ಮನ್ನು ಗತಕಾಲಕ್ಕೆ ಎಳೆದುಕೊಂಡು ಹೋಗುತ್ತಾರೆ.

ಚಿತ್ರದ ನಾಯಕ ಅನೀಸ್ ಹೊಸಬ ಎನ್ನಲು ಸಾಧ್ಯವಿಲ್ಲ. ನಟನೆಯಲ್ಲಿ ಪಳಗಿದವರಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಸೋನು ಸೊಗಸಾಗಿ ನಟಿಸಿದ್ದಾರೆ. ದಿಲೀಪ್ ರಾಜ್ ಎಂದಿನಂತೆ ಸಲೀಸಾಗಿ ಅವಿನಾಶ್‌ಗೆ ಪೈಪೋಟಿ ನೀಡಿದ್ದಾರೆ. ಧರ್ಮ ನಟನೆ ಕೂಡ ಪ್ರಶಂಸಾರ್ಹ.

ಕ್ಯಾಮರಾ ಕೆಲಸ, ಎಡಿಟಿಂಗ್, ಸಂಗೀತ ಎಲ್ಲವೂ ಚಿತ್ರಕ್ಕೆ ತಕ್ಕಂತಿದೆ. ಸಂಗೀತ ನಿರ್ದೇಶಕ ಜೇಮ್ಸ್ ವಸಂತ್ ನೀಡಿರುವ ಮೂರು ಹಾಡುಗಳಂತೂ ಮನಮೋಹಕ.

ಅಂತೂ ಬೇರೆ ಭಾಷೆಗಳ ಚಿತ್ರದಂತೆ ನಮ್ಮಲ್ಲೂ ಹೊಸ ಪ್ರಯೋಗಗಳು ನಡೆಯುತ್ತಿರುವುದು ಮತ್ತು ಅದು ಹೊಸ ವರ್ಷದ ಆರಂಭದಲ್ಲೇ ನಡೆದಿರುವುದು ಸಂತಸದ ಸಂಗತಿ.

ಹಾಗಾಗಿ ವಿಷ್ಣು ಅಗಲಿಕೆಯ ನೋವಿನಲ್ಲೂ ಚಿತ್ರಮಂದಿರದತ್ತ ಹೆಜ್ಜೆ ಹಾಕುವುದಕ್ಕಡ್ಡಿಯಿಲ್ಲ.

ಅಂದ ಹಾಗೆ ಈ ಚಿತ್ರ ತಮಿಳಿನಲ್ಲಿ 'ಕಾವಲರ್ ಕುಡಿಯಿರಪ್ಪು' ಎಂಬ ಹೆಸರಿನಲ್ಲಿ ಇದೇ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದ ಹಾಡುಗಳು ತಮಿಳಿನಲ್ಲೂ ಜನಪ್ರಿಯವಾಗಿವೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Show comments