Webdunia - Bharat's app for daily news and videos

Install App

ಗೌರಿಪುತ್ರ ಚಿತ್ರವಿಮರ್ಶೆ: ಹುಡುಕಾಟದ ಹುಡುಗಾಟವಿಲ್ಲ

Webdunia
ಚಿತ್ರ: ಗೌರಿಪುತ್ರ
ತಾರಾಗಣ: ಅಕ್ಷಯ್, ನಾಗಶೇಖರ್, ರಾಕೇಶ್, ನಿಖಿತಾ, ನಿವೇದಿತಾ, ರೂಪಿಕಾ
ನಿರ್ದೇಶನ: ಮಂಜು ಮಸ್ಕಲ್ ಮಟ್ಟಿ
ಸಂಗೀತ: ಮಿಲಿಂದ್ ಧರ್ಮಸೇನಾ

SUJENDRA
ಇದು ವಧು ಅನ್ವೇಷನೆಗಾಗಿ ನಾಯಕ ಪರದಾಡುವ ಕಥೆಯ ಸಿನಿಮಾ. ನಾಯಕ ಗಣೇಶ (ಅಕ್ಷಯ್) ಏನೇ ಮಾಡಿದರೂ ಹುಡುಗಿ ಸೆಟ್ ಆಗುವುದಿಲ್ಲ. ಗಣೇಶನಿಗೆ ಹುಡುಗಿ ಓಕೆ ಅನ್ನಿಸಿದಾಗಲೆಲ್ಲ ಏನಾದರೂ ಅಡೆತಡೆ. ಮದುವೆಯಾಗಬೇಕಿದ್ದ ಹುಡುಗಿ ಅದೇ ದಿನ ಪರಾರಿಯಾಗುವುದು, ಬೇರೆ ಯಾರನ್ನೋ ಇಷ್ಟಪಡುವುದನ್ನು ನೋಡುವ ಕರ್ಮ.

ಅವೆಲ್ಲಕ್ಕಿಂತಲೂ, ತಿರಸ್ಕರಿಸಿದ ಹುಡುಗಿಯರ ಪಾಲಿಗೆ ಗಣೇಶ ಆಪತ್ ಬಾಂಧವನಾಗುವುದು. ಎಲ್ಲವೂ ತಾನು ಅಂದುಕೊಂಡಂತೆಯೇ ಆಗಬೇಕು ಎಂದು ಬಯಸುವ ಸೌಮ್ಯ ಜೀವಿಯದ್ದು ಪರದಾಟದ ಬದುಕು. ಇಲ್ಲಿ ಸಾಂತ್ವನ ನೀಡಲೆಂದು ಬರುತ್ತಾನೆ ಅಂಧ ರೇಡಿಯೋ ಜಾಕಿ ಶೇಖರ್ ನಾಗ್ (ನಾಗಶೇಖರ್).

ತಮಿಳಿನ 'ರಾಮನ್ ತೇಡಿಯಾ ಸೀತೆ'ಯಿಂದಲೇ ಸ್ಫೂರ್ತಿ ಪಡೆದಿರುವ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ, ಒಂದು ಹಂತದವರೆಗೆ ಗೆಲ್ಲುತ್ತಾರೆ. ಆದರೆ ಭೂತಕಾಲದ ಕಥೆಯನ್ನು ಪ್ರೆಸೆಂಟ್ ಮಾಡುವ ರೀತಿಯಲ್ಲಿ ಸೋಲುತ್ತಾರೆ. ನಾಯಕ ವಧುವಿಗಾಗಿ ಪರದಾಟ ನಡೆಸುವುದು ಕಾಲೋಚಿತವೆನಿಸುವುದಿಲ್ಲ. ಗಂಭೀರ ದಾರಿಯಲ್ಲಿ ಹೋಗುವುದಕ್ಕಿಂತ ಹಾಸ್ಯವನ್ನು ಆರಿಸಿಕೊಳ್ಳುತ್ತಿದ್ದರೆ ಪಥ್ಯವಾಗುತ್ತಿತ್ತು.

ಇವೆಲ್ಲಕ್ಕಿಂತಲೂ ಚಿತ್ರದಲ್ಲಿ ಎದ್ದು ಕಾಣುವ ಪ್ರಮುಖ ಕೊರತೆ, ಲೈವ್ಲಿನೆಸ್ ಇಲ್ಲದೇ ಇರುವುದು. ನಾಯಕ ಅಕ್ಷಯ್ ನಟಿಸುತ್ತಿದ್ದಾರೆ ಎಂಬಷ್ಟಕ್ಕೇ ಸೀಮಿತರಾಗಿ ಬಿಡುತ್ತಾರೆ. ಇಂತಹ ಅದೆಷ್ಟೋ ಚಿತ್ರಗಳನ್ನು ಅನಂತ್‌ನಾಗ್ ಕೊಚ್ಚಿ ಹಾಕಿದ್ದಾರೆ. ಕನಿಷ್ಠ ಅದನ್ನು ನೋಡಿಯಾದರೂ ಕಲಿಯುವ ಅವಕಾಶ ಅಕ್ಷಯ್‌ಗಿತ್ತು. ಇದು ನಿರ್ದೇಶಕರಿಗೂ ಅನ್ವಯಿಸುತ್ತದೆ.

ಇಷ್ಟಾದ ಮೇಲೂ ಮಂಜು ಮಸ್ಕಲ್ ಮಟ್ಟಿ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಅವರು ಫೇಲಾಗಿರುವ ವಿಭಾಗಗಳನ್ನು ಕೊಂಚ ಗಂಭೀರವಾಗಿ ಪರಿಗಣಿಸಿ, ಆ ಕಡೆ ದೃಷ್ಟಿ ಹರಿಸಿದರೆ ಅವರು ಒಳ್ಳೆಯ ನಿರ್ದೇಶಕನಾಗುವ ಸಾಧ್ಯತೆಗಳಿವೆ.

' ಗೌರಿಪುತ್ರ'ದ ನಾಯಕ-ನಾಯಕಿಗಿಂತ ನಾಗಶೇಖರ್-ನಿವೇದಿತಾ ಪಾತ್ರಗಳೇ ಗಮನ ಸೆಳೆಯುತ್ತದೆ. ಅವರ ಕಥೆಯನ್ನೇ ಪ್ರಮುಖವನ್ನಾಗಿಸಿದ್ದರೆ ಚಿತ್ರಕ್ಕೊಂದು ಬೇರೆಯದೇ ಆಯಾಮ ಸಿಕ್ಕಿ ಬಿಡುತ್ತಿತ್ತು. ತೀರಾ ಆತ್ಮೀಯತೆಯಿಂದಲೇ ಅವರು ನಟಿಸಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ.

ನಿಖಿತಾ ಸೇರಿದಂತೆ ಉಳಿದ ಪಾತ್ರಗಳನ್ನು ಉಲ್ಲೇಖಿಸುವುದು ಅನಗತ್ಯ. ಮಿಲಿಂದ್ ಧರ್ಮಸೇನಾ ಸಂಗೀತದ ಎರಡು ಹಾಡುಗಳಷ್ಟೇ ಕೇಳುವಂತಿವೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

Show comments