Webdunia - Bharat's app for daily news and videos

Install App

ಗೋಕುಲ

Webdunia
ತಾರಾಗಣ : ವಿಜಯ್ ರಾಘವೇಂದ್ರ, ಯಶ್, ಪವನ್ ಕುಮಾರ್, ರಘುರಾಜ್, ಪೂಜಾಗಾಂಧಿ ಮತ್ತು ನಕ್ಷತ್ರ

ನಿರ್ದೇಶನ : ಪ್ರಕಾಶ್

` ಗೋಕುಲ' ಚಿತ್ರದ ಮೂಲಕ ದ್ವಾಪರಾಯುಗದ ಗೋಕುಲವನ್ನೇ ಕನ್ನಡ ಚಿತ್ರರಸಿಕರಿಗೆ ಉಣಬಡಿಸಿದ್ದಾರೆ ಯುವ ನಿರ್ದೇಶಕ ಪ್ರಕಾಶ್.ತುಂಬಾನೆ ವಿಷಯಗಳಿಗೆ `ಗೋಕುಲ ಇಷ್ಟವಾಗುತ್ತದೆ. ಚಿತ್ರದಲ್ಲಿ ನೀತಿಯಿದೆ. ನಿರೂಪಣೆಯಲ್ಲಿ ವೇಗವಿದೆ. ಚಿತ್ರದ ಕಲಾವಿದರ ದಂಡು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.

ಪ್ರಮುಖವಾಗಿ ಪ್ರಕಾಶ್, ನಿರ್ದೇಶನದ ಅ ಆ ಯಿಂದ ಹಿಡಿದು ಸಂಪೂರ್ಣ ವ್ಯಾಕರಣವನ್ನೇ ಅರೆದು ಕುಡಿದು ಬಿಟ್ಟಿದ್ದಾರೆ.ದೊಡ್ಡ ಸ್ಟಾರುಗಳಿಲ್ಲದೆ ಚಿತ್ರ ತಯಾರಿಸುವುದು ನಿರ್ದೇಶಕನಿಗೆ ತುಸು ಕಷ್ಟಕರ ಆದರೂ ಅಂತಹ ಕಷ್ಟಕ್ಕೂ ಸೈ ಎಂದಿದ್ದಾರೆ ಪ್ರಕಾಶ್..ವಾಹ್.

ಅನಾಥಾಶ್ರಮದಿಂದ ಹೊರಬೀಳುವ ಅಸಾಮಾನ್ಯ ನಾಲ್ವರು ಸಾಮಾನ್ಯ ಜನರಿಗೆ ಟೋಪಿ ಹಾಕಿ ಬದುಕುತ್ತಿರುತ್ತಾರೆ ಅದೊಮ್ಮೆ ವೃದ್ಧ ದಂಪತಿಯ ಮನೆಯಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಾರೆ. ನಾಲ್ವರಿಗೂ ಆ ದಂಪತಿಗಳ ಆಸ್ತಿಯ ಮೇಲೆ ಕಣ್ಣಿರುತ್ತದೆ. ಅಂತಿಮವಾಗಿ ಆಸ್ತಿಗಿಂತ ಸಂಬಂಧಗಳೇ ಹೆಚ್ಚು ಮೌಲ್ಯವಾದುದು ಎಂದು ಎಲ್ಲರೂ ಅರಿಯುತ್ತಾರೆ.

ಮಾತುಗಾರನಾಗಿ ವಿಜಯ ರಾಘವೇಂದ್ರ ಚಿತ್ರದಲ್ಲಿ ಪುಟಿಯುತ್ತಾರೆ. ಯಶ್ ನಟನೆಯಲ್ಲಿ ಇನ್ನೂ ಪಳಗಬೇಕು. ರಘುರಾಜ್ ಪರವಾಗಿಲ್ಲ ಆದರೆ ಮೆಚ್ಚಬೇಕಾದ್ದು ಪವನ್ ಕುಮಾರ್ ನಟನೆಯನ್ನು. ಪವನ್, ಒಳ್ಳೆಯ ಅವಕಾಶಗಳು ಸಿಕ್ಕರೆ ಆತನಿಂದ ಉತ್ತಮ ನಟನೆಯನ್ನು ನೀರೀಕ್ಷಿಸಬಹುದು.

ಶ್ರೀನಿವಾಸ ಮೂರ್ತಿ ಮತ್ತು ಸುಮಿತ್ರಾ ಜೋಡಿ ಸೊಗಸಾಗಿ ಮೂಡಿ ಬಂದಿದೆ. ನಕ್ಷತ್ರ ಹಾಗೂ ಪೂಜಾಳಿಗೆ ಹೆಚ್ಚು ರೋಲುಗಳಿಲ್ಲ. ಸತ್ಯ ಹೆಗಡೆ ಛಾಯಾಗ್ರಹಣ ಎದ್ದು ಕಾಣುತ್ತದೆ. ಮನೋಮೂರ್ತಿ ಸಂಗೀತ ನೆಮ್ಮದಿಯಿಂದ ಕೂಡಿದೆ.

ನಟಿ ರಾಗಿಣಿಯ ಕುಣಿತದಲ್ಲಿರುವ ಗೀತೆ ಚಿತ್ರದಲ್ಲಿ ಇಲ್ಲದೆ ಇದ್ದಿದ್ದರೆ `ಗೋಕುಲ ಇನ್ನೂ ಸ್ವಲ್ಪ ಚೆಂದ ಇರ್ತಿತ್ತು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನ್ನಡತನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಗಾಯಕ ಸೋನು ನಿಗಮ್‌ಗೆ ಸಂಕಷ್ಟ: ದೂರು ದಾಖಲು

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

Show comments