Webdunia - Bharat's app for daily news and videos

Install App

ಗಂಗೆ ಬಾರೆ ತುಂಗೆ ಬಾರೆ

Webdunia
ಸೋಮವಾರ, 5 ಮೇ 2008 (13:47 IST)
ಕನ್ನಡ ಚಿತ್ರರಂಗಕ್ಕೆ ಸಿಕ್ಸರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಪ್ರಜ್ವಲ್‌ಗೆ ನಂತರದ ದಿನಗಳಲ್ಲಿ ಬೇಡಿಕೆ ಹೆಚ್ಚಿ ಅನೇಕ ಅವಕಾಶಗಳು ಸಿಕ್ಕಿವೆ. ಇದರ ಗುಂಗಿನಲ್ಲಿ ಗಂಗೆ ಬಾರೆ ತುಂಗೆ ಬಾರೆ ಚಿತ್ರವನ್ನು ಒಪ್ಪಿಕೊಂಡರು. ಆದರೆ ಇಲ್ಲಿ ಸಂಪೂರ್ಣ ಎಡವಿದ್ದಾರೆ.

ಒಬ್ಬ ಕ್ರಿಯೇಟಿವ್ ವ್ಯಕ್ತಿಯೆಂದು ಹೆಸರು ಪಡೆದಿರುವ ಸಾಧು ಕೋಕಿಲ ಯಾಕಾಗಿ ಇಂತಹ ಚಿತ್ರವನ್ನು ನೀಡಿದ್ದಾರೆ ಎಂಬಂತಾಗಿದೆ. ಯಾವುದೇ ಅರ್ಥವಿಲ್ಲದ ಒಂದು ಕಳಪೆ ಚಿತ್ರಕಥೆಯನ್ನು ಆಯ್ಕೆ ಮಾಡಿದ ಸಾಧು ಅದರ ನಿರೂಪಣೆಯಲ್ಲೂ ಎಡವಿದ್ದಾರೆ. ಚಿತ್ರದ ಛಾಯಾಗ್ರಹಣ ಇಲ್ಲಿನ ದೃಶ್ಯಗಳಿಗೆ ಯಾವುದೇ ಮೆರುಗು ನೀಡಿಲ್ಲ.

ಉತ್ತಮ ಪ್ರತಿಭೆಯುಳ್ಳ ಪ್ರಜ್ವಲ್ ಯಾಕಾಗಿ ಇಂತಹ ಚಿತ್ರವನ್ನು ಒಪ್ಪಿಕೊಂಡರು ಎಂದು ಆಶ್ವರ್ಯವಾಗುತ್ತಿದೆ. ಯಾವುದೇ ಸತ್ವವಿಲ್ಲದ ಒಂದು ಪ್ರೇಮಕಥೆಯನ್ನು ಚಿತ್ರ ಒಳಗೊಂಡಿದೆ.

ವೃತ್ತಿಯಲ್ಲಿ ಎಲೆಕ್ಟ್ತ್ರಿಶಿಯನ್ ಆದ ಹರ್ಷ( ಪ್ರಜ್ವಲ್) ಗಂಗಾಳ (ಸುನೈನಾ) ಪ್ರೇಮಪಾಶಕ್ಕೆ ಬೀಳುತ್ತಾನೆ. ಆದರೆ ಗಂಗಾಳ ಸೋದರಿ ತುಂಗಾ ಕೂಡಾ ಹರ್ಷನನ್ನು ಪ್ರೀತಿಸುತ್ತಾಳೆ. ಹೀಗೆ ಸೋದರಿಯರಿಬ್ಬರ ನಡುವೆ ಪ್ರೀತಿಯ ವಿವಾದ ಉಂಟಾಗುತ್ತದೆ. ಕೊನೆಗೆ ತುಂಗಾ ಹರ್ಷನನ್ನು ತ್ಯಾಗ ಮಾಡುತ್ತಾಳೆ.

ಇಲ್ಲಿ ಪ್ರಜ್ವಲ್ ಅಭಿನಯ ಯಾವುದೇ ರೀತಿಯ ಮೋಡಿ ಮಾಡುವುದಿಲ್ಲ. ಸುನೈನಾ ಹಾಗೂ ಗಾಯತ್ರಿ ಅಭಿನಯದಿಂದ ಮಾರು ದೂರವಿದ್ದಾರೆ. ಆದರೆ ಬಿಚ್ಚಮ್ಮಗಳಾಗಿ ಮಿಂಚಿದ್ದಾರೆ. ಚಿತ್ರಕ್ಕೆ ಸಾಧು ನೀಡಿದ ಸಂಗೀತವೂ ಅವರ ನಿರ್ದೇಶನದಂತೆ ಕೆಟ್ಟದಾಗಿದೆ. ಬುಲೆಟ್ ಪ್ರಕಾಶ್ ಅವರ ಹಾಸ್ಯ ಕೂಡಾ ರಂಜಿಸುವುದಿಲ್ಲ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ವಿವಾದದ ಬಳಿಕ ಸೋನು ನಿಗಂ ಕನ್ನಡ ಬೆದರಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಕನ್ನಡತನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಗಾಯಕ ಸೋನು ನಿಗಮ್‌ಗೆ ಸಂಕಷ್ಟ: ದೂರು ದಾಖಲು

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Show comments