Webdunia - Bharat's app for daily news and videos

Install App

ಎದ್ದು ಗೆದ್ದ ಮಂಜುನಾಥ

Webdunia
MOKSHA
ಚಿತ್ರ : ಏದ್ದೇಳು ಮಂಜುನಾಥ
ನಿರ್ದೇಶಕ : ಗುರುಪ್ರಸಾದ್
ತಾರಾಗಣ : ಜಗ್ಗೇಶ್, ಯಜ್ಞಾ ಶೆಟ್ಟಿ

ಮಠದ ಗುರು ಕೊನೆಗೂ ಗೆದ್ದಿದ್ದಾರೆ. ಹೌದು ಗುರುಪ್ರಸಾದ್- ಜಗ್ಗೇಶ್ ಜೋಡಿ ಎದ್ದೇಳು ಮಂಜುನಾಥ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ನಿರೂಪಣಾ ಶೈಲಿ, ಅಸಹ್ಯವಾಗದಂತಹ ಹಾಸ್ಯ ಸಂಭಾಷಣೆ ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರದಲ್ಲಿ ಜಗ್ಗೇಶ್ ಸೋಂಬೇರಿ. ಕೆಲಸ ಮಾಡದೆ ಮನೆಯವರಿಗೆಲ್ಲಾ ಕಷ್ಟ ಕೊಡುವುದೇ ಈತನ ಕಾಯಕ. ಇಂತಿಪ್ಪ ಸಂದರ್ಭದಲ್ಲಿ ತಮ್ಮ ಎಂದಿನ ಶೈಲಿಯ ವಿಶಿಷ್ಟ ಸಂಭಾಷಮೆಯ ಮೂಲಕ ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಂತೆ ನಗಿಸಿದ್ದಾರೆ ಜಗ್ಗೇಶ್. ಪ್ರತಿಯೊಂದು ಮಾತು ವಾಸ್ತವಿಕತೆಗೆ ಹತ್ತಿರವಾಗಿದೆ. ಚಿತ್ರದೊಳಗೊಂದು ಚಿತ್ರ. ಕುರುಡನೊಬ್ಬ ಚಿತ್ರ ನಿರ್ದೇಶನ ಮಾಡಲು ಹೊರಡುವುದೇ ಚಿತ್ರದ ಕತೆ. ಕ್ಲೈಮಾಕ್ಸ್ ಸ್ವಲ್ಪ ಬೇಗನೇ ಮುಗಿಸಿದ್ದು ಮಾತ್ರ ನಿರಾಸೆಯಾಗುವಂತಿದೆ.

ಚಿತ್ರದಲ್ಲಿ ಪಲ್ಲವಿ ಹಾಡಿರುವ ಹಾಡಂತೂ ಅದ್ಭುತವಾಗಿ ಮೂಡಿಬಂದಿದೆ. ಚಿತ್ರವನ್ನು ಎತ್ತಿ ತೋರಿಸಿಕೊಟ್ಟ ಶ್ರೇಯಸ್ಸಲ್ಲಿ ಸಮಪಾಲು ಯಜ್ಞಾ ಶೆಟ್ಟಿಗೂ ಸಲ್ಲಬೇಕು. ಯಜ್ಞಾ ತಮ್ಮ ನಟನೆಯಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಾರೆ. ಒಟ್ಟಿನಲ್ಲಿ ಜಗ್ಗೇಶ್ ತಮ್ಮ 25ನೇ ಚಿತ್ರದಲ್ಲಿ ಭರ್ಜರಿಯಾಗಿಯೇ ಮಿಂಚಿದ್ದಾರೆ. ಜಗ್ಗೇಶ್ ಅಭಿಮಾನಿಗಳಿಗಂತೂ ಹಾಲುಜೇನು ಸವಿದ ಸಂಭ್ರಮವಿದು ಎಂದು ಧಾರಾಳವಾಗಿ ಹೇಳಬಹುದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ವಿವಾದದ ಬಳಿಕ ಸೋನು ನಿಗಂ ಕನ್ನಡ ಬೆದರಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಕನ್ನಡತನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಗಾಯಕ ಸೋನು ನಿಗಮ್‌ಗೆ ಸಂಕಷ್ಟ: ದೂರು ದಾಖಲು

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Show comments