Webdunia - Bharat's app for daily news and videos

Install App

ಅದೇ ಹಳೇ ಕಥೆಯ 'ಪ್ರೀತಿಯ ತೇರು' ಬರೀ ಬೋರು!

Webdunia
MOKSHA
ಚಿತ್ರ: ಪ್ರೀತಿಯ ತೇರು
ತಾರಾಗಣ: ತನೀಲ್, ಸೋನಿಯಾ, ಮಧುಮಿತ.
ನಿರ್ದೇಶನ: ಪ್ರಸಾದ್

ಹಳೇ ಕಾಲದ ಕಥೆಯನ್ನೇ ಮತ್ತೆ ಮತ್ತೆ ಚಿತ್ರ ಮಾಡಿದರೆ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ? ಮೊದಲೇ ಹೊಸಬರ ಚಿತ್ರವೆಂದರೆ ಚಿತ್ರಪ್ರೇಮಿಗಳು ಮಾರು ದೂರ ಓಡುತ್ತಾರೆ. ಅಂಥದ್ದರಲ್ಲಿ ಹೊಸಬರನ್ನು ಹಾಕಿಕೊಂಡು ಹಳೆಯ ಕಥೆಯನ್ನು ಮತ್ತೊಮ್ಮೆ ಚಿತ್ರಿಸಿ ತೋರಿಸಿದೆ ಪ್ರೀತಿಯ ತೇರು ಚಿತ್ರ.

ಚಿತ್ರದಲ್ಲಿ ನಾಯಕ ತನೀಲ್‌ಗೆ ರೌಡಿಯ ಪಾತ್ರ. ದುಡ್ಡಿಗಾಗಿ ಮಾಡಬಾರದ್ದನ್ನು ಮಾಡುತ್ತಿರುತ್ತಾನೆ. ಅದೇ ಸಮಯದಲ್ಲಿ ನಾಯಕಿಯೊಂದಿಗೆ ಆತನ ಪ್ರೀತಿ ಪ್ರಾರಂಭವಾಗುತ್ತದೆ. ಜೊತೆಗೆ ಸುತ್ತಾಡುವ ಆಕೆಯ ಪ್ರೀತಿ ನಾಟಕ ಎಂಬುದು ನಾಯಕನಿಗೆ ಮನದಟ್ಟಾಗುತ್ತದೆ. ಇದಿಷ್ಟು ಚಿತ್ರದ ಮೊದಲಾರ್ಧ. ನಾಯಕಿ ಪ್ರೀತಿಯ ಡ್ರಾಮಾ ಮಾಡಲು ಕಾರಣವೇನು ಎಂಬುದನ್ನು ತಿಳಿಯಬೇಕಾದರೆ ಚಿತ್ರದ ಉಳಿದರ್ಧ ನೋಡಬೇಕು. ತಿಳಿದುಕೊಳ್ಳುವ ಆಸೆ ನಿಮಗಿದ್ದರೆ ಚಿತ್ರಮಂದಿರಕ್ಕೆ ಹೋಗಿ ನೋಡುವುದಾದರೆ ನೋಡಿ!

ಇಂದಿನ ಕಾಲದಲ್ಲಿ ಇಂಥ ಕಥೆ ಇಟ್ಟುಕೊಂಡು ಚಿತ್ರ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಙಾನ ನಿರ್ದೇಶಕರಿಗೆ ಇಲ್ಲವಾಗಿದೆಯೋ ಅರ್ಥವಾಗುತ್ತಿಲ್ಲ. ಕೋಟಿ ಸುರಿದ ನಿರ್ಮಾಪಕರಿಗೂ ಇದೇ ಮಾತು ಅನ್ವಯಿಸುತ್ತದೆ. ತಮಾಷೆ ಎಂದರೆ ನಿರ್ಮಾಪಕರು ಈ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದ್ದಾರೆ. ಅವರೂ ಕೂಡಾ ನಟನೆಗೆ ಮುಂದೆದೂ ಇಳಿಯುವ ಸಾಹಸ ಮಾಡದಿದ್ದರೆ ಸಾಕು.

ನಾಯಕ ತನಿಲ್ ತಕ್ಷಣ ನಟನಾ ಶಾಲೆಗೆ ಸೇರುವುದು ಉತ್ತಮ. ಕಥೆ, ಸಂಭಾಷಣೆ ಎಲ್ಲವೂ ಮನಸ್ಸಿಗೆ ಬಂದಂತೆ ಮಾಡಲಾಗಿದೆ. ಮಧುಮಿತಾಳ ನಟನೆಯೂ ಅಷ್ಟಕ್ಕಷ್ಟೆ. ಇಂಥ ಚಿತ್ರ ಮಾಡಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಯಾಕೆ ಬರಲಿಲ್ಲ ಎಂದು ಕೇಳುವುದು ತಪ್ಪಲ್ಲವೇ?

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Show comments