Webdunia - Bharat's app for daily news and videos

Install App

ಪಾರೂಲ್ ಯಾದವ್ ಪ್ರಾಣಾಪಾಯಕ್ಕೆ ಸಿಲುಕಿದ ಸನ್ನಿವೇಶ?!

Webdunia
ಮಂಗಳವಾರ, 31 ಮಾರ್ಚ್ 2015 (10:10 IST)
ಸಾಮಾನ್ಯವಾಗಿ ಚಿತ್ರದ ಶೂಟಿಂಗ್ ನಲ್ಲಿ ಅನೇಕ ಬಗೆಯ ಅವಘಡಗಳು ನಡೆಯುತ್ತಲೇ ಇರುತ್ತವೆ. ಅದರ ಅರಿವು ಬಹುತೇಕ ಬಾರಿ ವೀಕ್ಷಕರಿಗೆ ಗೊತ್ತೇ ಆಗುವುದಿಲ್ಲ. ಅದೇ ರೀತಿ ವಾಸ್ತು ಪ್ರಕಾರ ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿ ಪಾರೂಲ್ ಯಾದವ್ ಗೂ ಸಹಿತ ಆಗಿದೆ. ವಿಷಯಕ್ಕೆ ಬರುವುದಾದರೆ ಈ ಮಾದಕ ಚೆಲುವೆ ಯೋಗರಾಜ್ ಭಟ್ ಅವರ ನಿರ್ದೇಶನದ ವಾಸ್ತುಪ್ರಕಾರ ಚಿತ್ರದಲ್ಲಿ ನಟಿಸಿದ್ದಾಳೆ. ಜಗ್ಗೇಶ್ ಜೋಡಿಯಾಗಿ ಪಾರೂಲ್ ನಟಿಸಿದ್ದಾಳೆ. 
ಸನ್ನಿವೇಶ ಒಂದರಲ್ಲಿ ಜಗ್ಗೇಶ್ ಮತ್ತು ಪಾರೂಲ್ ನಡುವೆ ಹೊಡೆದಾಟ ತಿಕ್ಕಾಟ ನಡೆಯುತ್ತದೆ. ಆ ದೃಶ್ಯದಲ್ಲಿ ಆಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಾಯಿಗೆ ಬಟ್ಟೆ ಕಟ್ಟುವ ಸನ್ನಿವೇಶವಿದ್ದು  ನಿರ್ದೇಶಕ ಯೋಗರಾಜ್ ಭಟ್ ಅವರು ಸನ್ನಿವೇಶ ನೈಜವಾಗಿರಲಿ ಎಂದು ಆಕೆಯ ಬಾಯಿಗೆ ಬಟ್ಟೆ ಕಟ್ಟಿ ನಟಿಸುವಂತೆ ಹೇಳಿದ್ದರಂತೆ. ಆದರೆ ಆ ರೀತಿ ಬಾಯಿಗೆ ಕಟ್ಟುವ ರಭಸದಲ್ಲಿ ಆಕೆಯ ಕತ್ತಿಗೆ  ಬಿಗಿದಿದ್ದರಂತೆ ಜಗ್ಗೇಶ್ ಬಟ್ಟೆಯಿಂದ. ಆ ಸಮಯದಲ್ಲಿ ಪಾರೂಲ್‌ಗೆ ಉಸಿರು ಗಟ್ಟೋಕೆ ಆರಂಭ ವಾಯ್ತು. ಆಕೆ ಉಸಿರಾಡಲು ತೊಂದರೆ ಪಡುತ್ತಿರುವುದನ್ನು ಕಂಡು ಎಲ್ಲರಿಗೂ ಅದು ನಟನೆ ಎನ್ನಿಸಿತ್ತಂತೆ. ಆಕೆಯ ಮುಖ ನೀಲಿಗಟ್ಟೋಕೆ ಆರಂಭವಾಯ್ತಂತೆ. ಅದನ್ನು ಛಾಯಾಗ್ರಾಹಕ ಸಹಿತ ಗುರುತಿಸಲಿಲ್ಲವಂತೆ. ಆ ಸನ್ನಿವೇಶ ನೆನೆದರೆ ಈಗಲೂ ಪಾರೂಲ್‌ಗೆ ಭಯ ಆಗುತ್ತಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?