Select Your Language

Notifications

webdunia
webdunia
webdunia
webdunia

ಹೋಗ್ ನಿಮ್ಮಪ್ಪನ್ನ ಕೇಳು: ಪ್ರಜ್ವಲ್ ದೇವರಾಜ್‌ಗೆ ಕಲ್ಯಾಣಿ ನೀತಿಪಾಠ

ಹೋಗ್ ನಿಮ್ಮಪ್ಪನ್ನ ಕೇಳು: ಪ್ರಜ್ವಲ್ ದೇವರಾಜ್‌ಗೆ ಕಲ್ಯಾಣಿ ನೀತಿಪಾಠ
, ಸೋಮವಾರ, 25 ಮೇ 2015 (10:31 IST)
ಜೀವ ನಿರ್ದೇಶಕರಾಗಿ ಬಿ.ಎ ಮಧು ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಚಿತ್ರ ಭುಜಂಗ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕ ಪ್ರಜ್ವಲ್ ದೇವರಾಜ್ ಕುರಿತು ನಾಯಕಿ ಮೇಘನಾ ರಾಜ್ ನಿನ್ನ ಮುಖ ಕನ್ನಡಿನಲ್ಲಿ ನೋಡಿದ್ದೀಯಾ ಎಂದು ಪ್ರಶ್ನಿಸುತ್ತಾಳೆ. ಆಗ ನಾಯಕ ಕನ್ನಡಿ ಮುಂದೆ ನಿಂತು ಅಮ್ಮನನ್ನು ಉದ್ದೇಶಿಸಿ 'ಹೃತಿಕ್ ರೋಶನ್ ಅಥವಾ ಶಾರೂಖ್ ಖಾನ್ ರೀತಿ ನನ್ನ ಹೆರಬಾರದಿತ್ತ' ಅನ್ನುತ್ತಾನೆ. ಅದಕ್ಕೆ ತಾಯಿ ಪಾತ್ರದ ಕಲ್ಯಾಣಿ 'ಹೋಗ್ ನಿಮ್ಮಪ್ಪನ್ನ ಕೇಳು ಹಲಸಿನಕಾಯಿ ತಿಂದು ಆಪಲ್ ರೀತಿ ಆಗಬೇಕು ಅಂದರೆ ಹೆಂಗೆ' ಎಂದು ಉತ್ತರ ನೀಡುವ ಹಾಸ್ಯ ದೃಶ್ಯದ ಚಿತ್ರೀಕರಣ ಇತ್ತೀಚಿಗೆ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಯಿತು. 
ಚಾಮರಾಜನಗರದ ವರುಣ್ ಮಹೇಶ್  ನಿರ್ಮಾಪಕರಾಗಿರುವ ಈ ಚಿತ್ರಕ್ಕೆ  ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಿದೆ.  ಕಲ್ಯಾಣಿ, ಭಜರಂಗಿ ಚೇತನ್, ಕರಿಸುಬ್ಬು  ಇನ್ನು ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

Share this Story:

Follow Webdunia kannada