Select Your Language

Notifications

webdunia
webdunia
webdunia
webdunia

ಯೋಗರಾಜ್ ಭಟ್ ಮತ್ತೆ ಗಣೇಶ್ ಚಿತ್ರ ನಿರ್ದೇಶನ ?

ಯೋಗರಾಜ್ ಭಟ್ ಮತ್ತೆ  ಗಣೇಶ್ ಚಿತ್ರ ನಿರ್ದೇಶನ ?
ಬೆಂಗಳೂರು , ಬುಧವಾರ, 19 ನವೆಂಬರ್ 2014 (13:36 IST)
ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಲೋಕ ತೆರೆದ ಚಿತ್ರ ಮುಂಗಾರು ಮಳೆ. ಅದೇ ಮಳೆ ಅದೇ ಹೀರೋ ಆದ ನಿರ್ದೇಶಕ ಎನ್ನುವ ಸಾಮಾನ್ಯ ಸಂಗತಿಗಳಿದ್ದರು ಸಹಿತ ಅದನ್ನು ಬಳಸಿಕೊಂಡು ಸಿದ್ಧ ಮಾಡಿದ ಚಿತ್ರದಿಂದ ಪ್ರೇಕ್ಷಕರ ಮನ ಉಲ್ಲಾಸಿತವಾಯ್ತು. ಅಷ್ಟೇ ಅಲ್ಲದೆ ಚಿತ್ರರಂಗದಲ್ಲಿ ಹೊಸದೊಂದು ಭಾಷ್ಯ ಬರೆಯಿತು.
 
ಮುಂಗಾರು ಮಳೆ ಕೇವಲ ಗಣೇಶ್ ಗೆ ಮಾತ್ರವಲ್ಲ ಯೋಗರಾಜ್ ಭಟ್ ಅವರಿಗೂ ಸಹಿತ ಜೀವದಾನ ಮಾಡಿತು. ಆ ಚಿತ್ರದ ಬಿಡುಗಡೆ ಅವರಿಬ್ಬರ ಭವಿಷ್ಯವನ್ನು ಹೊಳಪು ಮಾಡಿತು. ಅದಾದ ಬಳಿಕ ಗಾಳಿ ಪಟ ಬಂತು. ಆದರೆ ಗಾಳಿ ಜೋರಾಗಿ ಬೀಸಿದ್ದರಿಂದ ಪಟ  ನಿರೀಕ್ಷಿಸಿದಂತೆ ಹಾರಲಿಲ್ಲ . ಆದರೆ ಇವರಿಬ್ಬರ ಹಾದಿ ಬೇರೆ ಆಯ್ತು. 
 
ತಮ್ಮ ತಮ್ಮ ಬೆಳವನಿಯತ್ತ ಗಮನ  ನೆಟ್ಟರು. ಗಣೇಶ್ ನಟನೆ, ನಿರ್ಮಾಣ ಮಾಡುವ ಕಡೆಗೆ ಗಮನ ನೀಡಿದರೆ ಯೋಗರಾಜ್ ಭಟ್ ಅವರು ನಿರ್ದೇಶನ , ನಟನೆ ಹಾಗೂ ನಿರ್ಮಾಣದತ್ತ ತಮ್ಮ ಗಮನ ನೆಟ್ಟರು. ಈಗ ಭಟ್ಟರ ಹಾಡಿಲ್ಲ ಸಿನಿಮಾ ಇಲ್ಲ ಎನ್ನುವ ಪರಿಸ್ಥಿತಿ. 
 
ಇಷ್ಟೆಲ್ಲಾ ನಡುವೆ ಗಣೇಶ್ ಮತ್ತು ಯೋಗರಾಜ್ ಭಟ್ ಅವರು ಒಟ್ಟಿಗೆ ಕೆಲಸ ಮಾಡಲ್ವ ಮತ್ತೆ ಎನ್ನುವ ಪ್ರಶ್ನೆ ಬಹುತೇಕರನ್ನು ಕಾದಿದೆ. ಈಗಲೂ ಕಾಡುತ್ತಲೇ ಇದೆ. ಅವರ ಚಿಂತೆ, ಆಲೋಚನೆಗೆ ಈಗ ಕಡಿವಾಣ ಬಿದ್ದಿದೆ ಏನೇ ಹೇಳ ಬಹುದಾಗಿದೆ. ಏಕೆಂದರೆ ಈಗ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಬಲವಾಗಿದೆ. 
 
ಭಟ್ಟರ ನಿರ್ದೇಶನದಲ್ಲಿ ಗಣಪ ನಟಿಸುತ್ತಿದ್ದಾರೆ. ಅದು ಈಗ ಸುದ್ದಿಯಾಗಿ ಎಲ್ಲೆಡೆ ಹರಡಿದೆ. ಅದಕ್ಕೊಂದು ಅಂತಿಮ ರೂಪ ಬರಲು ಸ್ವಲ್ಪ ದಿನಗಳು ಮಾತ್ರ ಕಾಯ ಬೇಕಾಗಿದೆ ಎಂದಿದ್ದಾರೆ ಗಾಂಧಿ ನಗರವಾಸಿಗಳು.

Share this Story:

Follow Webdunia kannada