Webdunia - Bharat's app for daily news and videos

Install App

ಪ್ರೇಮಕಥೆ ಹೊತ್ತು ಬರ್ತಿದ್ದಾರೆ ಯೋಗರಾಜ್ ಭಟ್ರು

Webdunia
ಸೋಮವಾರ, 30 ನವೆಂಬರ್ 2015 (12:39 IST)
ಕನ್ನಡದ ಕ್ರಿಯಾಶೀಲ ನಿರ್ದೇಶಕರಲ್ಲಿ ಒಬ್ಬರು ಯೋಗರಾಜ್ ಭಟ್ರು. ಮುಂಗಾರು ಮಳೆ, ಡ್ರಾಮಾ, ವಾಸ್ತರಪ್ರಕಾರ. ಪರಮಾತ್ಮ ಮುಂತಾದ ಸಿನಿಮಾಗಳನ್ನು ನೀಡಿರುವ ಭಟ್ಟರು ಇದೀಗ ಹೊಸ ಕಥೆಯೊಂದಿಗೆ ಪ್ರೇಕ್ಷಕರೆದುರಿಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ. 

ಈಗಾಗಲೇ ಭಟ್ಟರು ತಮ್ಮ ಹೊಸ ಸಿನಿಮಾದ ಸ್ಕ್ರಿಫ್ಟಿಂಗ್ ಕೆಲಸವನ್ನು ಮುಗಿಸಿದ್ದಾರೆ.ಅಲ್ಲದೇ ಸಿನಿಮಾಕ್ಕೆ ನಾಯಕನನ್ನು ಈಗಗಾಲೇ ಭಟ್ಟರು ಆಯ್ಕೆ ಮಾಡಿದ್ದಾರಂತೆ.ಅಂದ್ಹಾಗೆ ಭಟ್ಟರ ಸಿನಿಮಾದ ನಾಯಕ ನವ ಪ್ರತಿಭೆ ಆಕಾಶ್ ನಾಗ್ ಪಾಲ್.ಆಕಾಶ್ ಈಗಾಗಲೇ ಮುಂಬೈನಲ್ಲಿ ಆಕ್ಟಿಂಗ್ ಕ್ಲಾಸ್ ಅನ್ನು ಮುಗಿಸಿಕೊಂಡು ಬಂದಿದ್ದಾರಂತೆ. ಭಟ್ಟರಿಗೆ ಆತ್ಮೀಯರೊಬ್ಬರು ಆಕಾಶ್ ನನ್ನು ಪರಿಚಯಿಸಿದ್ರಂತೆ. ಸಿನಿಮಾದಲ್ಲಿ ಇಬ್ಬರೂ ನಾಯಕಿಯರು ಇರಲಿದ್ದು ಇದುವರೆಗೂ ನಾಯಕಿಯರನ್ನು ಆಯ್ಕೆ ಮಾಡಿಲ್ಲ. ಸಿನಿಮಾ ಹೆಸರು ಕೂಡ ಇನ್ನೂ ನಿರ್ಧಾರವಾಗಿಲ್ಲ.
 
ಇನ್ನು ಸಿನಿಮಾದ ಪ್ರಮುಖ ವಿಶೇಷತೆ ಅಂದ್ರೆ ಈ ಸಿನಿಮಾದ ಬಹುತೇಕ ಭಾಗವನ್ನು ಹಡಗಿನಲ್ಲಿ ಚಿತ್ರೀಕರಿಸಲಾಗುತ್ತಂತೆ. ಸದ್ಯ ಭಟ್ಟರ ದನಕಾಯೋನು ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದು ಇದು ರಿಲೀಸ್ ಆದ ಬಳಿಕ ಭಟ್ಟರು ತಮ್ಮ ಹೊಸ ಸಿನಿಮಾದ ಕಡೆ ಗಮನ ಹರಿಸಲಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments