Select Your Language

Notifications

webdunia
webdunia
webdunia
webdunia

ಪ್ರೇಮಕಥೆ ಹೊತ್ತು ಬರ್ತಿದ್ದಾರೆ ಯೋಗರಾಜ್ ಭಟ್ರು

ಪ್ರೇಮಕಥೆ ಹೊತ್ತು ಬರ್ತಿದ್ದಾರೆ ಯೋಗರಾಜ್ ಭಟ್ರು
, ಸೋಮವಾರ, 30 ನವೆಂಬರ್ 2015 (12:39 IST)
ಕನ್ನಡದ ಕ್ರಿಯಾಶೀಲ ನಿರ್ದೇಶಕರಲ್ಲಿ ಒಬ್ಬರು ಯೋಗರಾಜ್ ಭಟ್ರು. ಮುಂಗಾರು ಮಳೆ, ಡ್ರಾಮಾ, ವಾಸ್ತರಪ್ರಕಾರ. ಪರಮಾತ್ಮ ಮುಂತಾದ ಸಿನಿಮಾಗಳನ್ನು ನೀಡಿರುವ ಭಟ್ಟರು ಇದೀಗ ಹೊಸ ಕಥೆಯೊಂದಿಗೆ ಪ್ರೇಕ್ಷಕರೆದುರಿಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ. 

ಈಗಾಗಲೇ ಭಟ್ಟರು ತಮ್ಮ ಹೊಸ ಸಿನಿಮಾದ ಸ್ಕ್ರಿಫ್ಟಿಂಗ್ ಕೆಲಸವನ್ನು ಮುಗಿಸಿದ್ದಾರೆ.ಅಲ್ಲದೇ ಸಿನಿಮಾಕ್ಕೆ ನಾಯಕನನ್ನು ಈಗಗಾಲೇ ಭಟ್ಟರು ಆಯ್ಕೆ ಮಾಡಿದ್ದಾರಂತೆ.ಅಂದ್ಹಾಗೆ ಭಟ್ಟರ ಸಿನಿಮಾದ ನಾಯಕ ನವ ಪ್ರತಿಭೆ ಆಕಾಶ್ ನಾಗ್ ಪಾಲ್.ಆಕಾಶ್ ಈಗಾಗಲೇ ಮುಂಬೈನಲ್ಲಿ ಆಕ್ಟಿಂಗ್ ಕ್ಲಾಸ್ ಅನ್ನು ಮುಗಿಸಿಕೊಂಡು ಬಂದಿದ್ದಾರಂತೆ. ಭಟ್ಟರಿಗೆ ಆತ್ಮೀಯರೊಬ್ಬರು ಆಕಾಶ್ ನನ್ನು ಪರಿಚಯಿಸಿದ್ರಂತೆ. ಸಿನಿಮಾದಲ್ಲಿ ಇಬ್ಬರೂ ನಾಯಕಿಯರು ಇರಲಿದ್ದು ಇದುವರೆಗೂ ನಾಯಕಿಯರನ್ನು ಆಯ್ಕೆ ಮಾಡಿಲ್ಲ. ಸಿನಿಮಾ ಹೆಸರು ಕೂಡ ಇನ್ನೂ ನಿರ್ಧಾರವಾಗಿಲ್ಲ.
 
ಇನ್ನು ಸಿನಿಮಾದ ಪ್ರಮುಖ ವಿಶೇಷತೆ ಅಂದ್ರೆ ಈ ಸಿನಿಮಾದ ಬಹುತೇಕ ಭಾಗವನ್ನು ಹಡಗಿನಲ್ಲಿ ಚಿತ್ರೀಕರಿಸಲಾಗುತ್ತಂತೆ. ಸದ್ಯ ಭಟ್ಟರ ದನಕಾಯೋನು ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದು ಇದು ರಿಲೀಸ್ ಆದ ಬಳಿಕ ಭಟ್ಟರು ತಮ್ಮ ಹೊಸ ಸಿನಿಮಾದ ಕಡೆ ಗಮನ ಹರಿಸಲಿದ್ದಾರೆ.

Share this Story:

Follow Webdunia kannada