Webdunia - Bharat's app for daily news and videos

Install App

ಮಾಧ್ಯಮಗಳಿಗೆ ಯಶ್ ಸವಾಲು

Webdunia
ಬುಧವಾರ, 19 ಅಕ್ಟೋಬರ್ 2016 (10:52 IST)
ಬೆಂಗಳೂರು: ಕನ್ನಡದ ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಯಶ್ ಪಕ್ಕಾ ಸಿನಿಮಾ ಶೈಲಿಯಲ್ಲಿ ಸವಾಲು ಹಾಕಿದ್ದಾರೆ. ಕಾವೇರಿ ಹೋರಾಟ ವಿಷಯದಲ್ಲಿ ತನ್ನ ನೈತಿಕತೆ ಪ್ರಶ್ನಿಸಿದ ಮಾಧ್ಯಮಗಳಿಗೆ ಚಾಟಿ ಬೀಸಿದ್ದಾರೆ.

ಹಿನ್ನೆಲೆಯಿಷ್ಟೇ. ಇತ್ತೀಚೆಗೆ ಕಾವೇರಿ ಹೋರಾಟದ ವಿಷಯದಲ್ಲಿ ಕಲಾವಿದರ ಜವಾಬ್ದಾರಿ ಕುರಿತು ನಟ ಯಶ್ ಅವರಲ್ಲಿ ಪ್ರಶ್ನಿಸಿದಾಗ, ಕೇವಲ ರೈತರ ಪರ ಚರ್ಚೆಯಲ್ಲಿ ಭಾಗವಹಿಸಿದ ಮಾತ್ರಕ್ಕೆ ರೈತರ ಕಾಳಜಿ ವಹಿಸಿದಂತಲ್ಲ ಎಂಬಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು ಮತ್ತು ಚಾನೆಲ್ ಯಶ್ ಅವರಿಗೆ ಚರ್ಚೆಯಲ್ಲಿ ಭಾಗವಹಿಸಲು ಬಹಿರಂಗ ಸವಾಲು ಹಾಕಿತ್ತು. ಇದಕ್ಕೆ ಉತ್ತರವಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಯಶ್, ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡುವ ಮಾಧ್ಯಮಗಳು ಕಾವೇರಿ ರೈತರಿಗೆ ಎಷ್ಟು ಒಳ್ಳೆಯದು ಮಾಡಿದ್ದಾರೆ? ನಾನು ಒಬ್ಬ ಕಲಾವಿದನಾಗಿ, ಮಹದಾಯಿ ಇರಬಹುದು ಕಾವೇರಿ ಹೋರಾಟವಿರಬಹುದು ಪಾಲ್ಗೊಂಡಿದ್ದೇನೆ.

ಕೇವಲ ಟಿವಿಯಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯದು. ಒಂದು ವೇಳೆ ಯಾವುದೇ ಮಾಧ್ಯಮದವರು ರೈತರಿಗೆ ಉಪಯೋಗವಾಗುವಂತಹ, ಅವರ ಸಮಸ್ಯೆ ನಿವಾರಿಸುವಂತಹ ಕಾರ್ಯಕ್ರಮವಿದ್ದರೆ ಎಷ್ಟು ಸುದೀರ್ಘ ಎಪಿಸೋಡ್ ಆದರೂ ಸರಿಯೇ ಖಂಡಿತಾ ನಾನು ಭಾಗವಹಿಸುತ್ತೇನೆ.

ನನಗೆ ಸವಾಲು ಹಾಕಿದ ಮಾಧ್ಯಮಕ್ಕೆ ನನ್ನ ಸವಾಲು. ಕಾವೇರಿಗಾಗಿ ಬೆಂಕಿ ಉರಿಸಲು ನಮ್ಮ ಯುವಕರು ರೆಡಿ ಇದ್ದಾರೆಂದರೆ, ಅದೇ ಬೆಂಕಿಯಿಂದ ರೈತರ ಮನೆ ದೀಪ ಬೆಳಗುವ ಕೆಲಸ ಮಾಡಲು ನಾನು ತಯಾರಿದ್ನೆ” ಎಂದು ಪಕ್ಕಾ ಸಿನಿಮಾ ಶೈಲಿಯಲ್ಲಿ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments