ಮಾಧ್ಯಮಗಳಿಗೆ ಯಶ್ ಸವಾಲು

Webdunia
ಬುಧವಾರ, 19 ಅಕ್ಟೋಬರ್ 2016 (10:52 IST)
ಬೆಂಗಳೂರು: ಕನ್ನಡದ ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಯಶ್ ಪಕ್ಕಾ ಸಿನಿಮಾ ಶೈಲಿಯಲ್ಲಿ ಸವಾಲು ಹಾಕಿದ್ದಾರೆ. ಕಾವೇರಿ ಹೋರಾಟ ವಿಷಯದಲ್ಲಿ ತನ್ನ ನೈತಿಕತೆ ಪ್ರಶ್ನಿಸಿದ ಮಾಧ್ಯಮಗಳಿಗೆ ಚಾಟಿ ಬೀಸಿದ್ದಾರೆ.

ಹಿನ್ನೆಲೆಯಿಷ್ಟೇ. ಇತ್ತೀಚೆಗೆ ಕಾವೇರಿ ಹೋರಾಟದ ವಿಷಯದಲ್ಲಿ ಕಲಾವಿದರ ಜವಾಬ್ದಾರಿ ಕುರಿತು ನಟ ಯಶ್ ಅವರಲ್ಲಿ ಪ್ರಶ್ನಿಸಿದಾಗ, ಕೇವಲ ರೈತರ ಪರ ಚರ್ಚೆಯಲ್ಲಿ ಭಾಗವಹಿಸಿದ ಮಾತ್ರಕ್ಕೆ ರೈತರ ಕಾಳಜಿ ವಹಿಸಿದಂತಲ್ಲ ಎಂಬಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು ಮತ್ತು ಚಾನೆಲ್ ಯಶ್ ಅವರಿಗೆ ಚರ್ಚೆಯಲ್ಲಿ ಭಾಗವಹಿಸಲು ಬಹಿರಂಗ ಸವಾಲು ಹಾಕಿತ್ತು. ಇದಕ್ಕೆ ಉತ್ತರವಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಯಶ್, ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡುವ ಮಾಧ್ಯಮಗಳು ಕಾವೇರಿ ರೈತರಿಗೆ ಎಷ್ಟು ಒಳ್ಳೆಯದು ಮಾಡಿದ್ದಾರೆ? ನಾನು ಒಬ್ಬ ಕಲಾವಿದನಾಗಿ, ಮಹದಾಯಿ ಇರಬಹುದು ಕಾವೇರಿ ಹೋರಾಟವಿರಬಹುದು ಪಾಲ್ಗೊಂಡಿದ್ದೇನೆ.

ಕೇವಲ ಟಿವಿಯಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯದು. ಒಂದು ವೇಳೆ ಯಾವುದೇ ಮಾಧ್ಯಮದವರು ರೈತರಿಗೆ ಉಪಯೋಗವಾಗುವಂತಹ, ಅವರ ಸಮಸ್ಯೆ ನಿವಾರಿಸುವಂತಹ ಕಾರ್ಯಕ್ರಮವಿದ್ದರೆ ಎಷ್ಟು ಸುದೀರ್ಘ ಎಪಿಸೋಡ್ ಆದರೂ ಸರಿಯೇ ಖಂಡಿತಾ ನಾನು ಭಾಗವಹಿಸುತ್ತೇನೆ.

ನನಗೆ ಸವಾಲು ಹಾಕಿದ ಮಾಧ್ಯಮಕ್ಕೆ ನನ್ನ ಸವಾಲು. ಕಾವೇರಿಗಾಗಿ ಬೆಂಕಿ ಉರಿಸಲು ನಮ್ಮ ಯುವಕರು ರೆಡಿ ಇದ್ದಾರೆಂದರೆ, ಅದೇ ಬೆಂಕಿಯಿಂದ ರೈತರ ಮನೆ ದೀಪ ಬೆಳಗುವ ಕೆಲಸ ಮಾಡಲು ನಾನು ತಯಾರಿದ್ನೆ” ಎಂದು ಪಕ್ಕಾ ಸಿನಿಮಾ ಶೈಲಿಯಲ್ಲಿ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿರೋಷ್ ಮದುವೆಗೆ ದಿನಗಣನೆ: ಕುಟುಂಬದೊಂದಿಗೆ ಉದಯಪುರಕ್ಕೆ ತೆರಳಿದ ಸೆಲೆಬ್ರೆಟಿ ಪ್ರಣಯ ಪಕ್ಷಿಗಳು

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಈಗ ಅಧಿಕೃತ: ರಶ್ಮಿಕಾ ಕ್ಯೂಟ್ ಪೋಸ್ಟ್ ನಲ್ಲಿ ಏನಿದೆ ನೋಡಿ

ಮತ್ತೇ ಒಂದಾದ ಕಮಲ್‌ ಹಾಸನ್‌, ರಜನಿಕಾಂತ್, ಯಾವಾ ಸಿನಿಮಾ ಗೊತ್ತಾ

ಟಾಕ್ಸಿಕ್ ಟೀಸರ್ ನಲ್ಲಿ ಬಿಗ್ ಶಾಕ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್ Video

ಚೆನ್ನಾಗಿಲ್ಲಾಂದ್ರೂ 100 ಕೊಟ್ಟು ಸಿನಿಮಾ ನೋಡ್ರೀ ಎಂದ ರವಿಚಂದ್ರನ್: ದುಡ್ಡಿನ ಬೆಲೆ ಗೊತ್ತಿದೆ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments