Webdunia - Bharat's app for daily news and videos

Install App

ದ್ವಾರಕೀಶ್ ಬಂಗಲೆ ಖರೀದಿಸಿದ್ರೂ ರಿಷಬ್ ಶೆಟ್ಟಿ ಒಂದು ದಿನವೂ ಅಲ್ಲಿ ಕಾಲ ಕಳೆದಿಲ್ಲ ಯಾಕೆ

Krishnaveni K
ಶುಕ್ರವಾರ, 9 ಆಗಸ್ಟ್ 2024 (11:22 IST)
ಬೆಂಗಳೂರು: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ದ್ವಾರಕೀಶ್ ಅವರ ಬಂಗಲೆಯನ್ನು ಖರೀದಿಸಿದ್ದರು ಎಂದು ಎಲ್ಲರಿಗೂ ಗೊತ್ತು. ಆದರೆ ಒಂದು ದಿನಕ್ಕೂ ಅಲ್ಲಿ ರಿಷಬ್ ಅಲ್ಲಿ ವಾಸಿಸಲಿಲ್ಲ. ಅದಕ್ಕೆ ಕಾರಣವೇನು ಎಂದು ಅವರ ಗೆಳೆಯ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಎಚ್ ಎಸ್ ಆರ್ ಲೇ ಔಟ್ ನಲ್ಲಿ ದ್ವಾರಕೀಶ್ ಆಸೆಪಟ್ಟು ದೊಡ್ಡ ಬಂಗಲೆಯೊಂದನ್ನು ಕಟ್ಟಿಸಿದ್ದರು. ಆದರೆ ತಮ್ಮ ಸಿನಿಮಾಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಿದಾಗ ಸಾಲ ತೀರಿಸಲು ದ್ವಾರಕೀಶ್ ಈ ಮನೆಯನ್ನು ಮಾರಲು ತೀರ್ಮಾನಿಸುತ್ತಾರೆ. ದ್ವಾರಕೀಶ್ ಮನೆಯನ್ನು ಆಗ ಖರೀದಿ ಮಾಡುವವರು ರಿಷಬ್ ಶೆಟ್ಟಿ.

ರಿಷಬ್ ಶೆಟ್ಟಿ ಈ ಮನೆಯನ್ನು ಬರೋಬ್ಬರಿ 10.5 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದರು. ಇಷ್ಟು ದುಬಾರಿ ಬೆಲೆಗೆ ಖರೀದಿ ಮಾಡಿದ ಮೇಲೆ ರಿಷಬ್ ಅಲ್ಲಿಗೆ ಶಿಫ್ಟ್ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ರಿಷಬ್ ಒಮ್ಮೆಯೂ ಅಲ್ಲಿ ವಾಸ ಮಾಡಲೇ ಇಲ್ಲ.

ಯಾಕೆ ಎಂಬ ಪ್ರಶ್ನೆಗೆ ಪ್ರಮೋದ್ ಶೆಟ್ಟಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ‘ಆ ಮನೆಯನ್ನು ಅಲ್ಲಿ ವಾಸಿಸಬೇಕು ಎನ್ನುವ ಉದ್ದೇಶದಿಂದ ಅವನು ಖರೀದಿ ಮಾಡಲಿಲ್ಲ. ಅಲ್ಲಿ ಒಂದು ದಿನವೂ, ಒಂದು ರಾತ್ರಿಯೂ ಅವನು ಕಳೆದಿಲ್ಲ. ಆ ಮನೆಯನ್ನು ಖರೀದಿ ಮಾಡಿದ್ದು ಸಹಾಯವಾಗಲಿ, ಬೇರೆ ಏನೋ ಕಮಿಟ್ ಮೆಂಟ್ ದೃಷ್ಟಿಯಿಂದ ಅಷ್ಟೆ. ಅಲ್ಲಿ ನೆಲೆಸಬೇಕು ಎನ್ನುವ ಯಾವ ಯೋಜನೆಯೂ ಅವನಿಗಿಲ್ಲ’ ಎಂದು ಪ್ರಮೋದ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

ಮುಂದಿನ ಸುದ್ದಿ
Show comments