Select Your Language

Notifications

webdunia
webdunia
webdunia
webdunia

ಧನುಷ್ ಅವರನ್ನು ರಾಯ್ ಲಕ್ಷ್ಮಿ ಆ ಪರಿ ಹೊಗಳಿದ್ಯಾಕೆ ಗೊತ್ತೇ ?!

ಧನುಷ್ ಅವರನ್ನು ರಾಯ್ ಲಕ್ಷ್ಮಿ ಆ ಪರಿ ಹೊಗಳಿದ್ಯಾಕೆ ಗೊತ್ತೇ ?!
, ಗುರುವಾರ, 30 ಜುಲೈ 2015 (10:28 IST)
ತಮಿಳು ಸ್ಟಾರ್ ಹೀರೋ ಧನುಷ್ ಅವರು ಇತ್ತೀಚಿಗೆ ಕನ್ನಡ ಚಿತ್ರರಂಗಕ್ಕೂ  ಬಂದು ತಮ್ಮ ಪ್ರತಿಭೆ ತೋರಿದ್ದರು. ಅವರು ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದಲ್ಲಿ ಹಾಡಿನ ಮೂಲಕ ಕನ್ನಡಿಗರ ಮನ ಸೆಳೆದಿದ್ದರು. ನಟನೆ, ನಿರ್ಮಾಣದ ಮೂಲಕ ತಮ್ಮನ್ನು ಸದಾ ಬ್ಯುಸಿಯಾಗಿಟ್ಟುಕೊಂಡಿರುವ ಧನುಷ್ ಅವರ ಹುಟ್ಟು ಹಬ್ಬ ಮಂಗಳವಾರ ನಡೆಯಿತು. ಅವರ ಜನ್ಮದಿನದಂದು ವಿಶ್ವದೆಲ್ಲೆಡೆಯಿಂದ  ಅನೇಕಾನೇಕ ಪ್ರಸಿದ್ಧರು ವಿಶ್ ಮಾಡಿದ್ದರು. 
ಧನುಷ್ ಅವರು ತಮ್ಮ ಸಹೋದ್ಯೋಗಿಗಳಿಂದ ಸಹ ಹಾರೈಕೆ ಸ್ವೀಕರಿಸಿದರು. ಅವರನ್ನು ಹಾರೈಸಿದವರಲ್ಲಿ ಕನ್ನಡದ ಸುಂದರಿಯರಾದ ರಾಯ್ ಲಕ್ಷ್ಮಿ ,ಪಾರ್ವತಿ ನಾಯರ್  ಸೇರಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 
 
ಲಕ್ಷ್ಮಿ ಅವರು ಟ್ವೀಟ್  ಮಾಡುತ್ತಾ  ಅತ್ಯಂತ ಪ್ರಭಾವಂತ, ವಿನಯವಂತ ವ್ಯಕ್ತಿ ಧನುಷ್ ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮ್ಮನ್ನ ಸುಖವಾಗಿಟ್ಟಿರಲಿ ಎಂದು ಸಹಿತ ಬರೆದು ತಮ್ಮ ಮನದ ಮಾತನ್ನು ವ್ಯಕ್ತ ಪಡಿಸಿದ್ದಾರೆ ಈ ತಾರೆ. 

Share this Story:

Follow Webdunia kannada