Select Your Language

Notifications

webdunia
webdunia
webdunia
webdunia

ತಾರಾ ದಂಪತಿಗಳ ನೋವಿಗೆ ಕಾರಣವೇನು ?

ತಾರಾ ದಂಪತಿಗಳ ನೋವಿಗೆ ಕಾರಣವೇನು ?
, ಗುರುವಾರ, 18 ಡಿಸೆಂಬರ್ 2014 (10:02 IST)
ವೈಭವಿ ಜಗದೀಶ್ ಬದುಕಲ್ಲಿ ಹೀಗೆಲ್ಲ ಆಗುತ್ತೆ ಅಂತ ಆಕೆಯ ತಂದೆ ತಾಯಿಗಳು ತಿಳಿದೇ ಇರಲಿಲ್ಲ. ಯಾವ ತಾಯಿತಂದೆ ಇಂತಹ ಒಂದು ಪ್ರಕರಣ ಬಯಸುತ್ತಾರೆ ಹೇಳಿ. ಇದರಿಂದ  ತಾರ ದಂಪತಿಗಳಾದ ಜೈ ಜಗದೀಶ್ ಮತ್ತು ನಿರ್ದೇಶಕಿ  ವಿಜಯ ಲಕ್ಷ್ಮಿ ಸಿಂಗ್ ಅವರಿ ಸಿಕ್ಕಾಪಟ್ಟೆ ಬೇಸರವಾಗಿದೆ ಎಂದೇ ಹೇಳ ಬಹುದಾಗಿದೆ. 
ಪಾರ್ಟಿ ಒಂದರಲ್ಲಿ ಜೈ ಜಗದೀಶ್ ಅವರ ಮಗಳ ಕೆನ್ನೆ ಹಿರಿಯ ನಟ ಹಾಗೂ ಹಾಲಿ ವಸತಿ ಸಚಿವ ಅಂಬರೀಶ್ ಅವರು ಮುತ್ತು ಕೊಡುತ್ತಿದ್ದ ಫೋಟೋ ಕಳೆದ ವಾರ ಸಾಕಷ್ಟು ಗದ್ದಲ ಮಾಡಿತ್ತು. ಅವರ ಬಗ್ಗೆ ಇಲ್ಲಸಲ್ಲದ್ದನ್ನು ಹರಡುವ ಪ್ರಯತ್ನ ಮಾಡಲಾಗಿತ್ತು. ಆಕೆಯನ್ನು ಅಂಬರೀಶ್ ಅವರ ಜೊತೆ ಬೇರೆಯ ರೀತಿಯಲ್ಲಿಯೆ ಅರ್ಥ ಬರುವಂತೆ ಬಿಂಬಿಸಲಾಗಿತ್ತು.
 
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ವೈಭವಿ ಈ ರೀತಿ ಆದದ್ದಕ್ಕೆ ಆಕೆಗೆ ಇರಿಸುಮುರಿಸು ಉಂಟಾಗಿದೆ ಎಂದು ಹೇಳಿದ್ದಾಳೆ.  ತಾನು ಹುಟ್ಟಿದ ದಿನದಿಂದ ಕಂಡ ಅಮಬೀಶ್ ಅವರ ಬಗ್ಗೆ ಹೀಗೆ ಇಲ್ಲ ಸಲ್ಲದ್ದು ಹರಡಿರುವ ಬಗ್ಗೆ ಆಕೆಗೆ ಆಶ್ಚರ್ಯ ಉಂಟಾಗಿದೆ, ಜೊತೆಗೆ ಬೇಸರ. ಅವರು ತನ್ನ ಗಾಡ್ ಫಾದರ್  ಎಂದು ಹೇಳಿದ್ದಾಳೆ ಈಕೆ. ವೈಭವಿಗೆ ಅಂಬರೀಶ್ ತನ್ನ ಮಾಮ ಎನ್ನುವ ಬಗ್ಗೆ ವಿವರಿಸುವಾಗ ಇರಿಸುಮುರಿಸು . ಖಂಡಿತ  ಹಾಗಾಗೋದು ಸಹಜ ವೈಭವಿ. ಇಂತಹ ಕೃತ್ಯಕ್ಕೆ ಬಲಿ ಪಶು   ಆಗಿರುವ ನಿನಗೆ ಆ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಎದುರಿಸುವ ಧೈರ್ಯ ಬೆಳೆಯಲಿ. 

Share this Story:

Follow Webdunia kannada