Webdunia - Bharat's app for daily news and videos

Install App

ಧೀರ ರಣವಿಕ್ರಮದಲ್ಲಿ ಅಂತದ್ದೇನಿದೆ... ಅಷ್ಟೊಂದು ಗಮನ ಸೆಳೆಯುವಂತದ್ದು ?

Webdunia
ಮಂಗಳವಾರ, 24 ಜೂನ್ 2014 (11:46 IST)
ಪುನೀತ್ ರಾಜ್ ಕುಮಾರ್ ಅವರ ನಟನೆಯ ಧೀರ ರಣ ವಿಕ್ರಮ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಈ ಸಿನಿಮಾವನ್ನು ನಿರ್ದೇಶಕ ಪವನ್ ವಡೆಯರ್ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸದಾ ಅನೇಕ ಸುದ್ದಿಗಳು ಗಮನ ಸೆಳೆಯುವಂತೆ ಇದೆ. ಆರಂಭದಲ್ಲಿ ಪುನೀತ್ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸಂಗತಿ ಸುದ್ದಿ ಆಗಿತ್ತು,



 
ಆ ಬಳಿಕ ಹೀರೋಯಿನ್ ಆಯ್ಕೆ.. ಅದಾದ ಬಳಿಕ ಹಂಪಿಯಲ್ಲಿ ನಡೆಸಿದ ಶೂಟಿಂಗ್ ವಿಷಯಕ್ಕೆ ಸಂಬಂಧಪಟ್ಟ ಸುದ್ದಿ. ಹೀಗೆ ಏನಾದರೊಂದು ಸದ್ದು ಮಾಡುತ್ತಲೇ ಇದೆ. ಈ ಚಿತ್ರವು ಸದಾ ಸುದ್ದಿಗಳ ಆಗರವಾಗಿ ಬಿಡುಗಡೆಗಿಂತ ಮುಂಚೆಯೇ ಎಲ್ಲರ ಗಮನ ಸೆಳೆಯುತ್ತಿದೆ ಇಂತಹ ಕಾರಣಗಳಿಂದ.
 
ಈಗ ಮತ್ತೊಂದು ವಿವಾದಿತ ಸುದ್ದಿ ಎಲ್ಲರ ಗಮನ ಸೆಳೆಯುತ್ತಿದೆ ಎಂದೇ ಹೇಳ ಬಹುದು. ಈ ಚಿತ್ರದಲ್ಲಿ ಪುನೀತ್ ಸಾಧುವಿನಂತೆ ವೇಷಧಾರಣೆ ಮಾಡಿದ್ದಾರೆ ಎಂದು ತಿಳಿಸುವಂತಹ ಪೋಸ್ಟರ್ ರಾರಾಜಿಸುತ್ತಿದೆ.ಇದು ಈಗ ಎಲ್ಲರ ಗಮನ ಸೆಳೆದಿದೆ. ಆದರೆ ನಿರ್ದೇಶಕ ಪವನ್ ವಡೆಯರ್ ಇದೊಂದು ಸುಳ್ಳು ಛಾಯಾಚಿತ್ರ. ಈ ರೀತಿಯ ಯಾವುದೇ ರೀತಿಯ ಅಂಶಗಳು ಸಹ ಸಿನಿಮಾದಲ್ಲಿ ಇರುವುದಿಲ್ಲ ಎನ್ನುವ ಸಂಗತಿ ಹೇಳಿದ್ದಾರೆ.
 
ಒಟ್ಟಾರೆ ಚಿತ್ರದಲ್ಲಿ ಯಾವುದೇ ರೀತಿಯ ವಿವಾದಿತ ಸಂಗತಿಗಳು ಇಲ್ಲ ಎನ್ನುವ ಮಾತನ್ನು ಚಿತ್ರತಂಡ ಹೇಳಿದ್ದಾರೆ.  ಸದ್ಯಕ್ಕಂತೂ ಧೀರನ ಮೇಲೆ ಜನರ ಗಮನ ಬಿದ್ದಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments