Webdunia - Bharat's app for daily news and videos

Install App

ದರ್ಶನ್ ಗೆ ಮನೆ ಊಟಕ್ಕೆ ಅನುಮತಿ ಕೊಟ್ಟರೂ ಬೇಕಾಬಿಟ್ಟಿ ಬಿರಿಯಾನಿ ತಿನ್ನೋ ಹಾಗಿಲ್ಲ: ಇಲ್ಲಿದೆ ರೂಲ್ಸ್ ವಿವರ

Krishnaveni K
ಬುಧವಾರ, 10 ಜುಲೈ 2024 (10:14 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತಮಗೆ ಜೈಲೂಟ ಸೇರುತ್ತಿಲ್ಲ, ಮನೆ ಊಟಕ್ಕೆ ಅವಕಾಶ ಕೊಡಿ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಮನೆ ಊಟ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ತಿನ್ನಬಹುದು ಎಂದು ಅರ್ಥವಲ್ಲ. ಅದರ ನಿಯಮಗಳು ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಕೈದಿಯ ಆರೋಗ್ಯ ಗಮನದಲ್ಲಿಟ್ಟುಕೊಂಡು ಕೋರ್ಟ್ ಆತನಿಗೆ ಮನೆ ಊಟ ಮಾಡಲು ಅವಕಾಶ ನೀಡುತ್ತದೆ. ಇದಕ್ಕಾಗಿ ಪ್ರತಿನಿತ್ಯ ಅವರ ಊಟವನ್ನು ಮನೆಯಿಂದ ಒಬ್ಬ ವ್ಯಕ್ತಿ ತಂದುಕೊಡಬೇಕು. ಜೈಲಿನ ಐಡಿ ಕಾರ್ಡ್, ಒಪ್ಪಿಗೆ ಪತ್ರ ಪಡೆದ ವ್ಯಕ್ತಿಯಷ್ಟೇ ಊಟ ತರಬಹುದಾಗಿದೆ.

ಒಂದು ವೇಳೆ ಆತನಿಗೆ ಅನಿವಾರ್ಯವಾಗಿ ಒಂದು ದಿನ ಬರಲಾಗದೇ ಇದ್ದರೆ ಮೊದಲೇ ಬೇರೊಬ್ಬ ವ್ಯಕ್ತಿ ಬರುವುದಾಗಿ ಒಪ್ಪಿಗೆ ಪಡೆದು ಈ ಮೊದಲೇ ನಿಗದಿತ ವ್ಯಕ್ತಿಗೆ ನೀಡಲಾಗಿದ್ದ ಐಡಿ ಕಾರ್ಡ್ ತೆಗೆದುಕೊಂಡು ಬರಬೇಕಾಗುತ್ತದೆ. ಇದರಿಂದ ಜೈಲಿನಲ್ಲಿ ಕೈದಿಗೆ ನೀಡಲಾಗುವ ಊಟೋಪಚಾರದ ಖರ್ಚು ವೆಚ್ಚವೇನೋ ಕಡಿಮೆಯಾಗುತ್ತದೆ. ಜೊತೆಗೆ ಆಹಾರದಿಂದ ಅನಾರೋಗ್ಯವಾದರೆ ಜೈಲು ಅಧಿಕಾರಿಗಳು ಹೊಣೆಯಾಗಿರುವುದಿಲ್ಲ.

ಆದರೆ ಮನೆ ಊಟ ಎಂಬ ಮಾತ್ರಕ್ಕೆ ದರ್ಶನ್ ಗೆ ಪ್ರತಿನಿತ್ಯ ಬಾಡೂಟ ಅಂತೂ ಸಿಗಲ್ಲ. ಯಾವುದೇ ಕೈದಿಗೂ ಮನೆ ಊಟ ಎಂದರೆ ಅಧಿಕ ಕೊಬ್ಬಿನಂಶವಿರುವ ಅಂದರೆ ಮಾಂಸಾಹಾರದ ಊಟ ತಂದುಕೊಡಲು ಅವಕಾಶವಿಲ್ಲ. ಜೈಲಿನ ನಿಯಮದ ಪ್ರಕಾರವೇ ಇಂತಿಷ್ಟೇ ಆಹಾರವನ್ನು ಮಾತ್ರ ಮನೆಯಿಂದ ತಂದುಕೊಡಬಹುದಾಗಿದೆ. ಅದೂ ಜೈಲಿನಲ್ಲಿ ಅನುಮತಿಸಲಾದ ಆಹಾರವನ್ನಷ್ಟೇ ಕೊಡಬಹುದಾಗಿದೆ. ಇಷ್ಟೆಲ್ಲಾ ಮಾಡಬೇಕಾದರೆ ಕೋರ್ಟ್ ಅನುಮತಿ ಕಡ್ಡಾಯವಾಗಿ ಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Hassan: ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಬಂದ್ ಅಂತೆ: ಸಾರ್ವಜನಿಕರಿಂದಲೇ ಟೀಕೆ

ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲು ಗಡುವು: ಥಗ್ ಲೈಫ್ ಸಿನಿಮಾಕ್ಕೆ ರಾಜ್ಯದಲ್ಲಿ ಬ್ಯಾನ್‌ ಎಚ್ಚರಿಕೆ

Actor Kamal Hassan: ಮೌನವಾಗಿರುವ ಕೆಲ ನಟರ ಮಧ್ಯೆ ಚೇತನ್ ಹೇಳಿಕೆಗೆ ಭಾರೀ ಮೆಚ್ಚುಗೆ

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಬಹುಭಾಷಾ ಹಿರಿಯ ನಟ ರಾಜೇಶ್‌ ಇನ್ನಿಲ್ಲ

Kamal Hassan: ಬಹಿರಂಗ ಕ್ಷಮೆ ಕೇಳದಿದ್ದರೆ ಕಮಲ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಬ್ಯಾನ್

ಮುಂದಿನ ಸುದ್ದಿ
Show comments