Webdunia - Bharat's app for daily news and videos

Install App

ಕಲಾವಿದರ ನಡುವೆ ಪರಸ್ಪರ ಗೌರವವಿದೆ: ಸುದೀಪ್

Webdunia
ಬುಧವಾರ, 6 ಮೇ 2015 (10:03 IST)
ಕಳೆದ ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದರು.ನಾವು ನಟರು ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಅನಗತ್ಯವಾದ ಜಗಳ ಕದನದ ಟ್ವೀಟ್  ಮಾಡುತ್ತಾ ಕಾಲಹರಣ ಮಾಡಬೇಡಿ. ಸಣ್ಣ ಸಂಗತಿಯನ್ನು ದೊಡ್ಡದು ಮಾಡಬೇಡಿ, ನಿಮ್ಮ ಬಳಿ ರಿಕ್ವೆಸ್ಟ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡುವುದರ ಮೂಲಕ ಹೇಳಿದ್ದರು. ಆ ಮಾತಿಗೆ ನವರಸ ನಾಯಕ ಜಗ್ಗೇಶ್ ಸಹಿತ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. 
ಆ ಬಗ್ಗೆ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.ಸೋಮವಾರ ರಾತ್ರಿ ಸುದೀಪ್ ಅವರು ಎಲ್ಲರಿಗೂ  ಧನ್ಯವಾದಗಳು. ನನ್ನ ಭಾವನೆಗೆ ಪ್ರತಿಕ್ರಿಯೆ ತೋರಿದ್ದಕ್ಕೆ. ಕಲಾವಿದರ ವಿಷಯ ಮುಂದಿಟ್ಟುಕೊಂಡು ಜಗಳ ಆಡದೆ ಅವರ ಮುಖದಲ್ಲಿ ನಗು ತರಿಸಿ. ಅನಗತ್ಯ ವಾದ ಚರ್ಚೆಗೆ ಆದ್ಯತೆ ನೀಡದಿರಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ ಮತ್ತೊಮ್ಮೆ. 
 
ಸಾಮಾಜಿಕ ಸ್ಥಳಗಳಲ್ಲಿ ಅಭಿಮಾನಿಗಳು  ಜಗಳ ಆಡದಿರಿ . ನಾವು ಒಬ್ಬರಿಗೊಬ್ಬರು ಗೌರವ ಕೊಡ್ತೀವಿ. ನಮ್ಮಲ್ಲಿ ವೃತ್ತಿಪರ ಸ್ಪರ್ಧೆ ಇರುತ್ತದೆಯೇ ವಿನಃ ಮತ್ಯಾವುದೇ ರೀತಿಯ ವೈಮನಸ್ಯ ಇರುವುದಿಲ್ಲ. ಈ ಕಾರಣವನ್ನು ಮುಂದಿಟ್ಟುಕೊಂಡು ನೀವು ಜಗಳಕ್ಕೆ ಆಸ್ಪದ ನೀಡದಿರಿ. ನನ್ನ ಭಾವನೆಗಳಿ ಪ್ರತಿಕ್ರಿಯೆ ತೋರಿದ ಎಲ್ಲರಿಗೂ ಧನ್ಯವಾದಗಳು, ಸಾಮಾಜಿಕ  ಫಾರ್ಮ್ ಗಳಲ್ಲಿ ಪದಗಳ ಬಳಕೆಯ ಬಗ್ಗೆ ಗಮನ ನೀಡುತ್ತೀರೆಂದು ನಂಬಿದ್ದೇನೆ.ಕಲಾವಿದರ ವದನದಲ್ಲಿ ನಗೆಯನ್ನು ತರಿಸುವ ಕೆಲಸ ಮಾಡುತ್ತೀರೆಂದು ಆಶಿಸುತ್ತೇನೆ ಎಂದು ಟ್ವೀಟಿಸಿ ಹೇಳಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments