Webdunia - Bharat's app for daily news and videos

Install App

ಗೌತಮ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಲಿರುವ ವಿಕ್ರಮ್

Webdunia
ಗುರುವಾರ, 21 ಮೇ 2015 (10:22 IST)
ನಟ ಸೂರ್ಯ ಅವರಿಗೆಂದು ತಯಾರು ಮಾಡಿದ ಕಥೆಯಲ್ಲಿ ವಿಕ್ರಮ್ ನಟಿಸಲು ಸಿದ್ಧರಾಗುತ್ತಿದ್ದಾರೆ ಎನ್ನುವುದು ಈಗ ತಿಳಿದು ಬಂದ ಸಂಗತಿಯಾಗಿದೆ. ಅಂಜಾನ್ ಚಿತ್ರದಲ್ಲಿ ನಟಿಸುವ  ಮೊದಲು  ಸೂರ್ಯ  ಗೌತಮ್ ಮೆನನ್ ಚಿತ್ರದಲ್ಲಿ ನಟಿಸುತ್ತಾರೆ ಎಂದು ನಿರ್ಧಾರವಾಗಿತ್ತು, ಗೌತಮ್  ಮೆನನ್ ತಯಾರು ಮಾಡಿದ ಕಥೆ ತಮಗೆ ಇಷ್ಟ ಆಗಲಿಲ್ಲ ಎಂದು ಹೇಳಿ ಸೂರ್ಯ ಆ ಪ್ರಾಜಕ್ಟ್ ನಿಂದ ಹೊರ ಬಂದರು. 
ಆ ಬಳಿಕ ಸೂರ್ಯ ನಿರ್ದೇಶಕ  ಲಿಂಗುಸ್ವಾಮಿ ಅವರ ಅಂಜಾನ್ ಚಿತ್ರದಲ್ಲಿ ನಟಿಸಿದರು. ಅದೇರೀತಿ ಗೌತಮ್  ಅವರು ಅಜಿತ್ ಹೀರೋ ಆಗಿರುವ ಎನ್ನೈ ಅರಿಂದಾಲ್ ಸಿನಿಮಾ ಮಾಡಿದರು. ಗೌತಮ್ ಮೆನನ್ ಈಗ ಶಿಂಬು ಹೀರೋ ಆಗಿರುವ  ಮಡಮಯಡಾ ಚಿತ್ರವನ್ನು ಮಾಡುತ್ತಿದ್ದಾರೆ. ಈಗ ನಿರ್ಮಾಣದಲ್ಲಿರುವ ಚಿತ್ರವನ್ನು ಪೂರ್ಣ ಮಾಡಿದ ಬಳಿಕ ಗೌತಮ್  ಅವರು ವಿಕ್ರಮ್ ಅಭಿನಯದ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 
 
ಆದರೆ ಇದು ಸೂರ್ಯಾಗೆಂದು ಸಿದ್ಧ ಮಾಡಿದ ಕಥೆಯಾಗಿದ್ದು, ಈಗ ಅದನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಲಾಗಿದೆ ಎನ್ನುವ ಸಂಗತಿ ಹೊರ ಬಂದಿದೆ.ವಿಕ್ರಮ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಸೂರ್ಯ ಅವರಿಗಾಗಿ ಸಿದ್ಧ ಮಾಡಿದ ಕಥೆಯಲ್ಲಿ ವಿಕ್ರಮ್ ಅವರಿಗೆಂದು ಬದಲಾವಣೆಗಳನ್ನು ಮಾಡಲಾಗಿದೆ. ಈ ಚಿತ್ರದ ಮೂಲಕ  ವಿಕ್ರಮ್ ಭಿನ್ನ ರೂಪದಲ್ಲಿ ಅವರ ಅಭಿಮಾನಿಗಳ ಮುಂದೆ ಬರಲಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments