1 ಕೋಟಿ ದಾನ ಮಾಡ್ತೀನಿ ಎಂದು ಸಂಕಷ್ಟಕ್ಕೀಡಾದ ವಿಜಯ್ ದೇವರಕೊಂಡ

Webdunia
ಗುರುವಾರ, 7 ಸೆಪ್ಟಂಬರ್ 2023 (16:19 IST)
ಹೈದರಾಬಾದ್: ಖುಷಿ ಸಿನಿಮಾ ಮೊದಲ ಎರಡು ದಿನದ ಗಳಿಕೆ ನೋಡಿ ಉಬ್ಬಿಹೋಗಿದ್ದ ನಟ ವಿಜಯ್ ದೇವರಕೊಂಡ ತಮ್ಮ ಸಂಭಾವನೆಯಿಂದ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಅವರ ನಿರ್ಧಾರ ಈಗ ಅವರಿಗೇ ಮುಳುವಾಗಿದೆ.

ವಿಜಯ್ ದೇವರಕೊಂಡ ತಲಾ 1 ಲಕ್ಷ ರೂ.ನಂತೆ ಅರ್ಹ ಬಡವರಿಗೆ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಖುಷಿ ಸಿನಿಮಾ ಮೊದಲ ಎರಡು ದಿನದ ಬಳಿಕ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಇದರಿಂದಾಗಿ ನಿರ್ಮಾಪಕರಿಗೆ ನಷ್ಟವಾಗಿದೆ.

ವಿಜಯ್ ದೇವರಕೊಂಡ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಅಭಿಷೇಕ್ ನಾಮಾ ನಮಗೆ ವಿತರಣೆಯಲ್ಲಿ 8 ಕೋಟಿ ರೂ. ನಷ್ಟವಾಗಿದೆ. ನೀವೇನೋ ಬಡವರಿಗೆ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಮೊದಲು ನಮ್ಮಂತಹ ನಿರ್ಮಾಪಕರು, ವಿತರಿಕರಿಗೆ ಆದ ನಷ್ಟವನ್ನೂ ಭರ್ತಿ ಮಾಡಿಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಈ ಮೂಲಕ ಬಡವರಿಗೆ ದಾನ ಮಾಡಲು ಹೊರಟ ವಿಜಯ್ ಈಗ ನಿರ್ಮಾಪಕರಿಗೂ ನಷ್ಟ ಭರ್ತಿ ಮಾಡುವ ಸಂಕಷ್ಟಕ್ಕೀಡಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಲಿ: ಆಗ್ರಹಿಸಿದ ನಟಿ ಜ್ಯೋತಿಕಾ

ವಿಜಯ್ ಅವರ ಕೊನೆಯ ಸಿನಿಮಾ ಜಾಗತಿಕವಾಗಿ ಗಳಿಸಿದ್ದೆಷ್ಟು ಗೊತ್ತಾ

ಹೆಸರಿಡದ ಸಿನಿಮಾದ ಸಾಹಸ ಚಿತ್ರೀಕರಣ ವೇಳೆ ಅವಘಡ: ಟಾಲಿವುಡ್‌ ನಟ ಬಾಲಯ್ಯಗೆ ಶಸ್ತ್ರಚಿಕಿತ್ಸೆ

ನಟಿ ಕಾಜೋಲ್ ಗೆ ಸಾರ್ವಜನಿಕವಾಗಿ ಮುಜುಗರ: ಖಾಸಗಿ ಭಾಗ ಸ್ಪರ್ಶಿಸಿದ ವ್ಯಕ್ತಿ, ನಟಿಯ ರಿಯಾಕ್ಷನ್ ನೋಡಿ

ನಾನು ಮನೆಯಿಂದಲೇ ಊಟ ಕಳುಹಿಸುತ್ತೇನೆ, ಸಹೋದರ ಸೋನಮ್ ಉಪವಾಸ ಸತ್ಯಾಗ್ರಹ ಕೈಬಿಡಿ: ಸಲ್ಮಾನ್ ಖಾನ್ ಮನವಿ

ಮುಂದಿನ ಸುದ್ದಿ
Show comments