Select Your Language

Notifications

webdunia
webdunia
webdunia
webdunia

ಓಕೆ ಕಾದಲ್ ಕಣ್ಮಣಿ, ಓಕೆ ಬಂಗಾರಂ, ಹೌದು ಹೌದು ಹೌದು.. : ಪ್ರಕಾಶ್ ರಾಜ್

ಓಕೆ  ಕಾದಲ್ ಕಣ್ಮಣಿ, ಓಕೆ ಬಂಗಾರಂ, ಹೌದು ಹೌದು  ಹೌದು.. : ಪ್ರಕಾಶ್ ರಾಜ್
, ಸೋಮವಾರ, 20 ಏಪ್ರಿಲ್ 2015 (11:35 IST)
ಭಾರತೀಯ ಚಿತ್ರರಂಗದ ವಿಶಿಷ್ಟ ನಟ ಪ್ರಕಾಶ್ ರಾಜ್. ಅವರು ತಮಗೆ ನೀಡಿದ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ನಿರ್ಮಾಪಕ ಹಾಗೂ ನಿರ್ದೇಶಕರ ಮೆಚ್ಚಿನ ನಟರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ ಓಕಾದಲ್ ಕಣ್ಮಣಿ. ತಮಿಳು ಚಿತ್ರವಾದ ಇದರಲ್ಲಿ ದುಲ್ಕರ್ ಸಲ್ಮಾನ್ ಮತ್ತು ನಿತ್ಯ ಮೆನನ್ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಆದಿತ್ಯ ವರದರಾಜನ್ ಮತ್ತು ತಾರ ಆ ಪಾತ್ರಗಳ ಹೆಸರು. ಇದರಲ್ಲಿ ಪ್ರಕಾಶ್ ರಾಜ್ ಅವರು ನಟಿಸಿರುವ ರೀತಿ ವಿಶಿಷ್ಟವಾಗಿದ್ದು, ಎಲ್ಲರ ಗಮನ ಸೆಳೆದಿದೆ.ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.   

ಈ ಬಗ್ಗೆ ನಟ ಪ್ರಕಾಶ್ ರಾಜ್ ತಮ್ಮ ಟ್ವಿಟ್ಟರ್  ಪೇಜ್ ನಲ್ಲಿ ನಿರ್ದೇಶಕ ಮಣಿರತ್ನಂ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಆ ಚಿತ್ರ ತಂಡಕ್ಕೂ ಸಹಿತ ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅತ್ಯಂತ ಖುಷಿ ಕೊಟ್ಟ ಸಿನಿಮಾ ಇದು ಎಂದು ಟ್ವೀಟ್ ಮಾಡಿ ಹೇಳಿದ್ದಾರೆ ಪ್ರಕಾಶ್. ಓಕೆ  ಕಾದಲ್ ಕಣ್ಮಣಿ, ಓಕೆ ಬಂಗಾರಂ, ಹೌದು ಹೌದು  ಹೌದು.. ಅತ್ಯಂತ ಖುಷಿ ಹಂಚುವ ಸುಂದರ ಸಿನಿಮಾ ಎಂದು ಈ ಸಮಯದಲ್ಲಿ ಹೇಳಿದ್ದಾರೆ ಜೊತೆ ಥ್ಯಾಂಕ್ ಯು ಮಣಿ ಸಾರ್ ಥ್ಯಾಂಕ್ ಯು ಟೀಮ್ ಎಂದು ಸಹಿತ ಬರೆದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಓಕೆ ಬಂಗಾರಂ ಹೆಸರಲ್ಲಿ ತೆಲುಗು ಭಾಷೆಯಲ್ಲೂ ಸಹಿತ ಬಿಡುಗಡೆ ಆಗಿದೆ. 

Share this Story:

Follow Webdunia kannada