Select Your Language

Notifications

webdunia
webdunia
webdunia
webdunia

ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸೋ ಇಚ್ಛೆಯಿದೆ- ಊರ್ವಶ್ರೀ ರೌಟೆಲಾ

ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸೋ ಇಚ್ಛೆಯಿದೆ- ಊರ್ವಶ್ರೀ ರೌಟೆಲಾ
, ಮಂಗಳವಾರ, 9 ಫೆಬ್ರವರಿ 2016 (11:27 IST)
ಮಿಸ್ಟರ್ ಐರಾವತ ಸಿನಿಮಾದಲ್ಲಿ ದರ್ಶನ್ ತೂಗುದೀಪ್ ಜೊತೆ ತೆರೆ ಮೇಲೆ ರೋಮ್ಯಾನ್ಸ್ ಮಾಡಿ ನಾಪತ್ತೆಯಾಗಿದ್ದ ನಟಿ ಊರ್ವಶ್ರೀ ಮತ್ತೆ ಕನ್ನಡಕ್ಕೆ ಬರೋ ಇಂಗಿತ ವ್ಯಕ್ತಪಡಿಸಿದ್ದಾರೆ. ಅವಕಾಶ ಸಿಕ್ರೆ ಮತ್ತೆ ಕನ್ನಡದಲ್ಲಿ ಅಭಿನಯಿಸ್ತೇನೆ ಅಂತಾ ಊರ್ವಶ್ರೀ ಹೇಳಿದ್ದಾರೆ.

ಮೊನ್ನೆಯಷ್ಟೇ ಮಿಸ್ ಯೂನಿವರ್ಸ್ ಸ್ಪರ್ಧೆಯ್ಲಲ್ಲಿ ಭಾಗವಹಿಸಿದ್ದ ಊರ್ವಶ್ರೀ ಮಿಸ್ಟರ್ ಐರಾವತ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಸ್ಯಾಂಡಲ್ ವುಡ್ ನಿಂದ ನಾಪತ್ತೆಯಾಗಿದ್ದರು. ಹೆಚ್ಚಿನವರು ಅವರು ಮತ್ತೆ ಕನ್ನಡಕ್ಕೆ ವಾಪಸ್ ಬರ್ತಾರಾ ಅನ್ನೋ ಸಂಶಯ ವ್ಯಕ್ತಪಡಿಸಿದ್ದರು.ಆದ್ರೀಗ ಊರ್ವಶ್ರೀ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅಲ್ಲದೇ ಅವಕಾಶ ಸಿಕ್ರೆ ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಅಂತಾ ಅವರು ಹೇಳಿದ್ದಾರೆ. ನಾನು ಒಂದೇ ಒಂದು ಸಿನಿಮಾದಿಂದಾಗಿ ಇಲ್ಲಿ ಸಾವಿರಾರು ಅಭಿಮಾನಿಗಳನ್ನು ಗಳಿಸಿದ್ದೇನೆ. ಜನರ ಪ್ರೀತಿ ನೋಡಿ ಖುಷಿಯಾಗುತ್ತೆ ಅಂದಿದ್ದಾರೆ.
 
ಇನ್ನು ಊರ್ವಶ್ರೀ ಹಿಂದಿ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.ಬಾಲಿವುಡ್ ನ ಸನಮ್ ರೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದಾರೆ. ಈ ಸಿನಿಮಾದ ಬಗ್ಗೆ ಅವರಿಗೆ ಒಂದಷ್ಟು ನಿರೀಕ್ಷೆಗಳಿವೆ. ಈ ವಾರ ಈ ಸಿನಿಮಾ ತೆರೆಗೆ ಬರುತ್ತಿದೆ.ಪುಲ್ಕಿತ್ ಸಾಮ್ರಾಟ್ ಹಾಗೂ ಯಾಮಿ ಗೌತಮಿ ಈ ಸಿನಿಮಾದಲ್ಲಿ ಊರ್ವಶ್ರೀ ಅವರಿಗೆ ಸಾಥ್ ನೀಡಿದ್ದಾರೆ.

Share this Story:

Follow Webdunia kannada