Webdunia - Bharat's app for daily news and videos

Install App

ಪಾರ್ವತಮ್ಮ ನೆನೆದು ಕಣ್ಣೀರು ಹಾಕಿದ ಉಮಾಶ್ರೀ, ಸುಧಾರಾಣಿ

Webdunia
ಬುಧವಾರ, 31 ಮೇ 2017 (11:39 IST)
ಬೆಂಗಳೂರು: ಇಂದು ಅಗಲಿದ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೆನೆದು ಕನ್ನಡ ಚಿತ್ರರಂಗದ ಗಣ್ಯರು, ಪಾರ್ವತಮ್ಮನಿಂದಾಗಿ ಚಿತ್ರರಂಗದಲ್ಲಿ ಮಿಂಚಿದ ಕಲಾವಿದರು ಕಂಬನಿ ಮಿಡಿದಿದ್ದಾರೆ.

 
ಚಿತ್ರರಂಗದ ತಾಯಿಯಾಗಿದ್ದವರು ಪಾರ್ವತಮ್ಮ. ನಾನು ಅವರ ಬ್ಯಾನರ್ ನ ಚಿತ್ರಗಳಲ್ಲಿ ಅಭಿನಯಿಸಿದ್ದು ಕಡಿಮೆಯಾದರೂ, ಭೇಟಿಯಾದಾಗಲೆಲ್ಲಾ ಆ ಚಿತ್ರಗಳನ್ನು ನೆನೆಸಿಕೊಂಡು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು ಎಂದು ಕಣ್ಣೀರು ಮಿಡಿಯುತ್ತಾ ಉಮಾಶ್ರೀ ಪಾರ್ವತಮ್ಮನವರನ್ನು ನೆನೆದಿದ್ದಾರೆ.

ಪಾರ್ವತಮ್ಮನಿಂದಾಗಿಯೇ ಚಿತ್ರರಂಗಕ್ಕೆ ಬಂದ ನಟಿ ಸುಧಾರಾಣಿ ಕೂಡಾ ಅವರ ಬಗ್ಗೆ ಹೇಳುತ್ತಾ ಗದ್ಗದಿತರಾದರು. ಹೆಚ್ಚು ಮಾತನಾಡದೇ ಮರಳಿದರು. ಇನ್ನು, ನಟಿ ಲೀಲಾವತಿ ಕೂಡಾ ತಮ್ಮ ಹಳೆಯ ದಿನಗಳನ್ನು ಹೇಳುತ್ತಾ ಕಣ್ಣೀರು ಮಿಡಿದರು.

ಈಗಿನ ನಟ, ನಟಿಯರಿಂದ ಹಿಡಿದು ಹಿರಿ ಕಿರಿಯ ಕಲಾವಿದರೆಲ್ಲರೂ ಸಾಲು ಸಾಲಾಗಿ ಬಂದು ಕಣ್ಣೀರು ಮಳೆಗೈಯುತ್ತಲೇ ಅಗಲಿದ ಅಮ್ಮನ ದರ್ಶನ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

ಮುಂದಿನ ಸುದ್ದಿ
Show comments