Webdunia - Bharat's app for daily news and videos

Install App

ಉದಯ್ ಕಿರಣ್ ಆತ್ಮಹತ್ಯೆಗೆ ಚಿರಂಜೀವಿ ಕಾರಣವಲ್ಲ: ನಟನ ಸಹೋದರ ಹೇಳಿದ್ದೇನು..?

Webdunia
ಸೋಮವಾರ, 10 ಜುಲೈ 2017 (14:04 IST)
ಟಾಲಿವುಡ್`ನ ಸ್ಫುರದ್ರೂಪಿ ನಟರ ಪೈಕಿ ಉದಯ್ ಕಿರಣ್ ಸಹ ಒಬ್ಬರು. ನುವ್ವು ನೇನು, ಔನನ್ನಾ ಕಾದನ್ನಾ, ಮನಸಂತಾ ನುವ್ವೆ ಹೀಗೆ ಸೂಪರ್ ಹಿಟ್ ಚಿಯ್ರಗಳನ್ನ ಕೊಟ್ಟ ನಟ 2014ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಚಿರಂಜೀವಿ ಕಾರಣ ೆಂಬ ವದಂತಿಗಳು ಹರಡಿದ್ದವು. ಆದರೆ, ಉದಯ್ ಕಿರಣ್ ಸಹೋದರಿ ಶ್ರೀದೇವಿ ಈ ಊಹಾಪೋಹಕ್ಕೆ ತೆರೆ ಎಳೆದಿದ್ಧಾರೆ.

ಪುತ್ರಿ ಸುಶ್ಮಿತಾ ಜೊತೆ ಮದುವೆಯಾಗಲು ನಿರಾಕರಿಸಿದ್ದರಿಂದ ಚಿರಂಜೀವಿ ಉದಯ್ ಕಿರಣ್`ಗೆ ಅವಕಾಶ ಸಿಗದಂತೆ ಮಾಡಿದ್ದರು. ಇದರಿಂದಲೇ ಮನನೊಂದ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡರು ಎಂದು ಸುದ್ದಿ ಹಬ್ಬಿತ್ತು. ಆದರೆ, ವರದಿಗಳನ್ನ ಶ್ರೀದೇವಿ ತಳ್ಳಿ ಹಾಕಿದ್ಧಾರೆ. ಚಿರಂಜೀವಿ ಯಾವಾಗಲೂ ನಮ್ಮ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದರು. ಉದಯ್ ಕಿರಣ್ ಕುಸಿದಾಗಲೆಲ್ಲ ಧೈರ್ಯ ಹೇಳುತ್ತಿದ್ದರು. ಕಿರಿಯ ಪತ್ರಕರ್ತೆ ಜೊತೆ ಬ್ರೇಕಪ್ ಆದಾಗಲೂ ಚಿರಂಜೀವಿ ಉದಯ್ ಕಿರಣ್ ಧೈರ್ಯ ತುಂಬಿದ್ದರು. ಉದಯ್ ಆತ್ಮಹತ್ಯೆಗೆ ಚಿರು ಕಾರಣರಲ್ಲ ಎಂದು ಶ್ರೀದೇವಿ ಸಂದರ್ಶನವೊಂದರಲ್ಲಿ ಹೇಳಿದ್ಧಾರೆ.

ಇದೇವೇಳೆ, ಸಹೋದರ ಉದಯ್ ಕಿರಣ್ ದಾಂಪತ್ಯ ಜೀವನದ ವಿರಸ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ವಿಶಿತಾ ಮತ್ತು ಸಹೋದರ ಉದಯ್ ಕಿರಣ್ ವಿವಾಹ ಮುಗಿಸಿಕೊಂಡು ನಾನು ಮಸ್ಕತ್`ಗೆ ತೆರಳಿದ್ದೆ. ನಾನು ಹಲವು ಬಾರಿ ಕರೆ ಮಾಡಿದಾಗಲೂ ಸಹೋದರ ಮಾತ್ರ ,ಮಾತನಾಡಿದ್ದ. ವಿಶಿತಾ ಮನೆಯಲ್ಲಿರುತ್ತಿರಲಿಲ್ಲ. ಅವರ ಸಂಬಂಧ ಹದಗೆಟ್ಟಿರುವುದು ಗಮನಕ್ಕೆ ಬಂದಿತ್ತು. ಇದೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶ್ರೀದೇವಿ ಹೇಳಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments