ದಕ್ಷಿಣ ಭಾರತದ ಅತ್ಯುತ್ತಮ ನಟಿ ಮಣಿಯರ ಸಾಲಿಗೆ ತ್ರಿಷ ಸಹ ಸೇರ್ಪಡೆ ಆಗುತ್ತಾರೆ. ಆಕೆ ತನ್ನ ನಟನೆಯ ಬಗ್ಗೆ ಅಪಾರ ಗೌರವ ಹೊಂದಿರುವ ಕಲಾವಿದೆ. ಇತ್ತೀಚಿನ ದಿನಗಳಲ್ಲಿ ನಟೀಮಣಿಯರು ಕೈಲಿ ಕೆಲಸ ಇಲ್ಲದೆ ಇದ್ದಾಗ ಐಟಂ ನಂಬರ್ ಕಡೆಗೆ ತಮ್ಮ ಚಿತ್ತ ನೆಟ್ಟ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ನಟಿ ತ್ರಿಷಗು ಸಹಿ ಹೇಳಿಕೊಳ್ಳುವಂತಹ ಅವಕಾಶಗಳು ಇಲ್ಲ. ಅದರ ಪ್ರಯೋಜನ ಪಡೆಯಲು ಆಕೆಯ ಬಳಿ ನಿರ್ದೇಶಕನೊಬ್ಬ ತನ್ನ ಹೊಸ ಸಿನಿಮಾದಲ್ಲಿ ಐಟಂ ನಂಬರ್ ನಲ್ಲಿ ನಟಿಸುವಂತೆ ಆಹ್ವಾನ ಕೊಟ್ಟನಂತೆ .
ಅದನ್ನು ಸಾರಾಸಗಟಾಗಿ ತಿರಸ್ಕರಿಸಿ ತಾನು ಬೇಕಾದರೆ ಉತ್ತಮ ಪಾತ್ರ ಇರುವ ಎರಡನೇ ಹೀರೋಯಿನ್ ಆಗಿ ನಟಿಸುತ್ತೇನೆ ವಿನಃ ಐಟಂ ನಂಬರ್ ನಲ್ಲಿ ಕಾಣಿಸಿ ಕೊಳ್ಳುವುದಿಲ್ಲ . ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರಿದೆ. ದುಡ್ಡಿಗಾಗಿ ಯಾವುದು ಸಿಕ್ಕರೆ ಆ ಪಾತ್ರ ಮಾಡಲ್ಲ ಎಂದು ಹೇಳಿದ್ದಾರೆ.ಈ ಹಿಂದೆ ಸಿಂಗಂ 2 ಮತ್ತು ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾಗಳಲ್ಲಿ ಐಟಂ ನಂಬರ್ ನಲ್ಲಿ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಅವುಗಳಿಗೆ ಆಕೆಯಿಂದ ಸಮ್ಮತಿ ಸಿಕ್ಕಿರಲಿಲ್ಲ. ಪ್ರಸ್ತುತ ಆಕೆ ಕನ್ನಡ ಚಿತ್ರ ಅಲ್ಲದೆ ತಮಿಳು ಚಿತ್ರದಲ್ಲಿ ಸಹ ನಟಿಸುತ್ತಿದ್ದು. ಈಗ ಸತ್ಯದೇವ ನಿರ್ದೇಶನದ ಬಾಲಕೃಷ್ಣ ಅವರ ನಟನೆಯ ಹೊಚ್ಚ ಹೊಸ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.