Webdunia - Bharat's app for daily news and videos

Install App

ರಾಜಮೌಳಿ ಬಾಹುಬಲಿಯಲ್ಲಿ ರಜನಿಕಾಂತ್ ನಟನೆ ?

Webdunia
ಸೋಮವಾರ, 21 ಏಪ್ರಿಲ್ 2014 (10:26 IST)
ಟಾಲಿವುಡ್ ಸಿನಿಮಾ ಇಂಡಸ್ಟ್ರಿ ಯಲ್ಲಿ ರಾಜಮೌಳಿ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಅವರು ಯಾವ ಚಿತ್ರವನ್ನೇ ಮಾಡಲಿ ವಿಶೇಷವಾಗಿರುತ್ತದೆ. ಪ್ರಸ್ತುತ ಅವರ ಬಹುನಿರೀಕ್ಷೆಯ ಚಿತ್ರ ಬಾಹುಬಲಿ. ಈ ನಿರ್ದೇಶಕ ಇತ್ತೀಚಿಗೆ ರಜನಿಕಾಂತ್ ಅವರ ಹೊಚ್ಚ ಹೊಸ ಚಿತ್ರ ವಿಕ್ರಮ ಸಿಂಹ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆ ಸಮಯದಲ್ಲಿ ರಜನಿಗೆ ರಾಜಮೌಳಿಯನ್ನು ಕಂಡು ಜಾಸ್ತಿ ಖುಷಿ ಆಗಿದೆ. ಅವರು ತಮ್ಮ ಭಾಷಣದಲ್ಲಿ ವಿಷಯ ಪ್ರಸ್ತಾಪಿಸುತ್ತಾ, ತನಗೆ ರಾಜಮೌಳಿ ಅವರ ನಿರ್ದೇಶನ  ಬಾಹುಬಲಿ ಚಿತ್ರ ಶೂಟಿಂಗ್ ನೋಡಲು  ಅವಕಾಶ ನೀಡ ಬೇಕು ಎಂದು ಹೇಳಿದರು. 
 
ಸೂಪರ್ ಸ್ಟಾರ್ ರಜನಿಕಾಂತ್ ಮಾತಿಗೆ ಸಿಕ್ಕಾಪಟ್ಟೆ ಖುಷಿ ಆದ ರಾಜಮೌಳಿಗಾರಿಗೆ ಏನು ಹೇಳ ಬೇಕು ಎಂದು ತಿಳಿಯದಷ್ಟು ಖುಷಿ ಉಂಟಾಯಿತು. ಅವರು,ಥ್ಯಾಂಕ್ಯು ಸರ್ ಎಂದು ಹೇಳಿ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.ಆದರೆ ಕಾಲಿವುಡ್ ಸಿನಿಮಾರಂಗದಲ್ಲಿ ಹರಡಿರುವ ಸುದ್ದಿ ಪ್ರಕಾರ  ಸೂಪರ್ ಸ್ಟಾರ್ ರಜನಿಕಾಂತ್ ಅವರು ಸ್ಟಾರ್ ನಿರ್ದೇಶಕ ರಾಜಮೌಳಿ   ಅವರ ಬಾಹುಬಲಿ ಚಿತ್ರದಲ್ಲಿ ಕಂಠ ದಾನ ಮಾಡುತ್ತಿದ್ದಾರೆ. !  
 
ರಾಜಮೌಳಿ ಅವರು ರಜನಿ ಬಳಿ ತಮ್ಮ ಚಿತ್ರಕ್ಕೆ ಧ್ವನಿ ನೀಡ ಬೇಕು ಎಂದು ಕೇಳಿದ್ದರಂತೆ. ಅದಕ್ಕೆ ರಜನಿ ಸಮ್ಮತಿ ನೀಡಿದ್ದಾರಂತೆ. ಈ ಸಂಗತಿಯನ್ನು ರಾಜಮೌಳಿ ಅವರು ಸದ್ಯದಲ್ಲೇ ಜಗತ್ತಿನ ಮುಂದೆ ಬಿಚ್ಚಿಡುವುದಾಗಿ ಕಾಲಿವುಡ್ ಮೂಲಗಳು ತಿಳಿಸಿವೆ. ಒಟ್ಟಾರೆ ಬಾಹುಬಲಿಯಲ್ಲಿ ದಕ್ಷಿಣ ಭಾರತ ಸಿನಿಮಾ ಸೆಲೆಬ್ರಿಟಿ ಗಳು ಒಂದಲ್ಲ ಒಂದು ಬಗೆಯಲ್ಲಿ ಸೇರ್ಪಡೆ ಆಗುತ್ತಾರೆ ಎನ್ನುವುದು ಸದ್ಯದ ನ್ಯೂಸ್.. ಇಲ್ಲಿ ಕನ್ನಡದ ಸುದೀಪ್ ಸಹ ಸೇರ್ಪಡೆ ಆಗ್ತಾರಾ ? 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments