Select Your Language

Notifications

webdunia
webdunia
webdunia
webdunia

ಇಂದು ನಿರ್ಧಾರವಾಗಲಿದೆ ಭಟ್ಟರ ವಾಸ್ತು ಪ್ರಕಾರದ ಭವಿಷ್ಯ ?!

ಇಂದು ನಿರ್ಧಾರವಾಗಲಿದೆ ಭಟ್ಟರ ವಾಸ್ತು ಪ್ರಕಾರದ ಭವಿಷ್ಯ ?!
, ಗುರುವಾರ, 2 ಏಪ್ರಿಲ್ 2015 (10:11 IST)
ಯೋಗರಾಜ್ ಭಟ್ ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ವಾಸ್ತು ಪ್ರಕಾರ ಇಂದು ಬೆಂಗಳೂರಿನ ಮೇನಕ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕಳೆದ ವರ್ಷ ಅಕ್ಷಯ ತೃತಿಯಾ ದಿನದಂದು   ಆರಂಭವಾದ ಈ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡು ಬಿಡುಗಡೆಗೆ ಕಾದಿತ್ತು. 
ಈ ಚಿತ್ರಕ್ಕೆ ಸುಮಾರು 25 ದಿನಗಳ ಕಾಲ ಸ್ವಿಜರ್ ಲ್ಯಾಂಡ್‌ನಲ್ಲಿ ಚಿತ್ರೀಕರಣ ನಡೆಯಿತು. ಅದಾದ ಬಳಿಕ ಬೆಂಗಳೂರಿನ ಅರಮನೆಯಲ್ಲಿ ಚಿತ್ರೀಕರಣ ನಡೆಯಿತು. ಈಗ ಎಲ್ಲ ಕೆಲಸಗಳು ಪೂರ್ಣಗೊಂಡು ಇಂದು ಅಂದರೆ ಎಪ್ರಿಲ್ ತಿಂಗಳ ಎರಡನೇ ತಾರೀಖು ಬಿಡುಗಡೆ ಆಗುತ್ತಿದೆ. 
 
ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಇದೆ. ರಕ್ಷಿತ್ ಶೆಟ್ಟಿ, ಜಗ್ಗೇಶ್, ಐಶಾನಿ ರೈ, ಅನಂತ್ ನಾಗ್, ಸುಧಾರಾಣಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Share this Story:

Follow Webdunia kannada