Webdunia - Bharat's app for daily news and videos

Install App

ವಿಕ್ಟರಿ ವೆಂಕಟೇಶ್ ಹೊಸ ಚಿತ್ರಕ್ಕೆ ಟೈಟಲ್ ಸಿಕ್ಕೇ ಬಿಡ್ತು !

Webdunia
ಬುಧವಾರ, 29 ಜುಲೈ 2015 (10:27 IST)
ಟಾಲಿವುಡ್ ನಲ್ಲಿ ಅತ್ಯಂತ ವಿಭಿನ್ನ ನಟ ಎಂದರೆ ವಿಕ್ಟರಿ ವೆಂಕಟೇಶ್ ಅವರು. ಸೂಪರ್ ಸ್ಟಾರ್ ಆಗಿರುವ ವೆಂಕಟೇಶ್ ತಾರ ಬದುಕಲ್ಲಿ ಏರುಪೇರು ಎರಡನ್ನು ಸಮವಾಗಿ ಎದುರಿಸಿ ಅದಕ್ಕೆ ಪೂರಕ ವಾಗಿ ತನ್ನನ್ನು ಮತ್ತಷ್ಟು ಗಟ್ಟಿಯಾಗಿ ಮಾಡಿಕೊಂಡು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೆಳೆದ ನಟ. ಅವರಿಗೆ ಕಥೆ ಇಷ್ಟ ಆದರೆ ಆಯ್ತು ಅದು ಮಲ್ಟಿ ಸ್ಟಾರರ್ ಆಗಿರಬಹುದು ಅಥವಾ ಕಾಮಿಡಿ ಅಂಶಗಳ ಕಥೆ ಆಗಿರ ಬಹುದು ಸೈ ಎಂದು ಬಿಡುತ್ತಾರೆ. ಆದ್ದರಿಂದ ಅವರು ನಿರ್ದೇಶಕರ ಮೆಚ್ಚಿನ ನಟ. ಈಗ ಬಂದಿರುವ ಸುದ್ದಿ ಎಂದರೆ ಅವರ ಹೊಸ ಚಿತ್ರದ ಕಥೆ. ಹೀರೋ ಆಗಿ ನಟಿಸುವ ಚಿತ್ರ ಸೆಟ್ಟೇರುತ್ತಿದೆ. 
ಹಾಗಂತ ಸುದ್ದಿ ಟಾಲಿವುಡ್ ಅಂಗಳದಿಂದ ಹೊರ ಬಂದಿದೆ. ಈ ಚಿತ್ರ ಯುನೈಟೆಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಪರುಚೂರಿ ಕಿರೀಟಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಓನಾಮಾಲು, ಮಳ್ಳಿ ಮಳ್ಳಿ ಇದಿ ರಾನಿ ರೋಜು  ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಕ್ರಾಂತಿ ಮಾಧವ್ ಅವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಚಿತ್ರಕ್ಕೆ ಸಂತೋಷಮೆ ಸಗಂ ಬಲಂ ಎನ್ನುವ ಶೀರ್ಷಿಕೆ ನಿಗದಿ ಆಗಿದೆ. ಲಕ್ಷ್ಮಿ , ತುಳಸಿ ಚಿತ್ರದ ಬಳಿಕ ನಯನತಾರ, ವೆಂಕಿ ಜೋಡಿ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ. ಎರಡು ಯಶಸ್ವಿ ಚಿತ್ರಗಳನ್ನು ನೀಡಿರುವ ಈ ತಾರಾಜೋಡಿಯ ಈ ಚಿತ್ರವೂ ಗೆಲುವಿನ ಪತಾಕೆ ಹಾರಿಸಲೆನ್ನುವ ಹಾರೈಕೆ ನಮ್ಮದು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments