ತನ್ನ ತಂದೆ ಗಳಿಸಿದ್ದ ಆಸ್ತಿಯನ್ನು ನೀರಿನಂತೆ ಖರ್ಚು ಮಾಡಿ ನಿರ್ಮಿಸಿದ ಚಿತ್ರ ಹುಚ್ಚ ವೆಂಕಟ. ಈ ಚಿತ್ರದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಆಗಿ ಸ್ಯಾಂಡಲ್ ವುಡ್ ಗೆ ಬಂದ ವೆಂಕಟ ಆ ಬಳಿಕ ಇಲ್ಲಿನ ವಾತಾವರಣವನ್ನು ಸ್ವೀಕರಿಸಲಾಗದೆ ವೆಂಕಟ ಇನ್ ಸಂಕಟ ಎನ್ನುವ ಪರಿಸ್ಥಿತಿ ಎದುರಿಸಿ ಎಲ್ಲರ ಗಮನ ಸೆಳೆದದ್ದು ಸುಳ್ಳಲ್ಲ. ವೆಂಕಟ ಅವರ ಸ್ಥಿತಿಯನ್ನು ಲೋಕ ನಕ್ಕಿತೆ ವಿನಃ ಮತ್ತೇನು ಮಾಡಲಿಲ್ಲ. ನಾವು ನಕ್ಕಾಗ ಪ್ರಪಂಚ ನಗುತ್ತೆ, ಆದರೆ ನಾವು ಅತ್ತಾಗ ಪ್ರಪಂಚ ನಗುತ್ತೆ ಎನ್ನುವ ಮಾತು ವೆಂಕಟ ಅವರ ಅನುಭವಕ್ಕೆ ಬರುವಂತೆ ಮಾಡಿತ್ತು ಅವರ ನಿರ್ಮಾಣದ ಚಿತ್ರ.
ಈಗ ಆ ದುಃಖವನ್ನು ಮರೆತು ಪೊರ್ಕಿ ಹುಚ್ಚ ವೆಂಕಟ ಆಗಿ ಜನರ ಮುಂದೆ ಬಂದಿದ್ದಾರೆ. ಅವರು ತಮ್ಮ ಹಿಂದಿನ ಚಿತ್ರ ಹಣ ಗಳಿಸದೆ ಇದ್ದರೂ ತಾವು ವಿಶ್ವದೆಲ್ಲೆಡೆ ಜನರ ಪ್ರೀತಿ ಗಳಿಸಲು ಸಾಧ್ಯವಾಯಿತು ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ. ಈ ಚಿತ್ರದ ಟ್ರೈಲರ್ ಸಹ ಈ ಸಮಯದಲ್ಲಿ ಬಿಡುಗಡೆ ಮಾಡಿ ತಾವು ಯಾವುದಕ್ಕೂ ಕೇರ್ ಮಾಡದ ವ್ಯಕ್ತಿ ಎಂದು ಸಾಬೀತು ಪಡಿಸಿದ್ದಾರೆ.