ಶೃತಿ ಹಾಸನ್ ನಟಿಸಲು ಆಗದೆ ಇರುವ ಅಥವಾ ದೂರ ಸರಿದ ಚಿತ್ರದಲ್ಲಿ ನಟಿಸಲು ತಮನ್ನಾ ಆಯ್ಕೆ ಆಗಿದ್ದಾಳೆ ಎನ್ನುವ ಸುದ್ದಿ ಕಾಲಿವುಡ್ನಿಂದ ಹೊರ ಬಂದಿದೆ. ಟಾಲಿವುಡ್ ನಟ ನಾಗಾರ್ಜುನ, ಕಾಲಿವುಡ್ ನಟ ಕಾರ್ತಿ ಅವರು ಒಟ್ಟಿಗೆ ನಟಿಸುತ್ತಿರುವ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರವನ್ನು ಪಿವಿಪಿ ಸಿನಿಮಾ ಸಂಸ್ಥೆ ನಿರ್ಮಿಸುತ್ತಿದೆ.
ಈ ಚಿತ್ರದ ಹೀರೋಯಿನ್ ಆಗಿ ಕಾರ್ತಿಗೆ ಜೋಡಿಯಾಗಿ ಶೃತಿ ಹಾಸನ್ ಆಯ್ಕೆ ಆಗಿದ್ದಳು. ಆದರೆ ಆ ಚಿತ್ರದ ಶೂಟಿಂಗ್ ಮೊದಲ ಶೆಡ್ಯೂಲ್ ಪೂರ್ತಿ ಆದ ಬಳಿಕ ಅದರಲ್ಲಿ ನಟಿಸಲ್ಲ ಎಂದು ಹೇಳಿದಳು. ಇದರಿಂದ ಆ ನಿರ್ಮಾಣ ಸಂಸ್ಥೆ ಆಕೆ ಮೇಲೆ ಕೇಸ್ ಹಾಕುವ ನಿರ್ಧಾರ ಮಾಡಿತು. ಹೊಸ ಚಿತ್ರಗಳಲ್ಲಿ ಸಮ್ಮತಿಸುವ ಹಾಗಿಲ್ಲ ಎಂದು ಕೋರ್ಟ್ ನೀಡಿರುವ ಆಜ್ಞೆಯನ್ನು ಹೈದರಾಬಾದ್ ಪೊಲೀಸರು ಆಕೆ ಮೇಲೆ ಕೇಸ್ ನಮೂದು ಮಾಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಆಕೆಯ ಬದಲಾಗಿ ತಮನ್ನಳಿಗೆ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲದೆ ತಮ್ಮು ಮತ್ತು ಕಾರ್ತಿ ಹಿಟ್ ಪೇರ್. ಇದು ಸಹ ಕಾರಣವಾಗಿದ್ದು, ಮತ್ತೆ ಈ ಚಿತ್ರದ ಮೂಲಕ ಒಂದಾಗಿದ್ದಾರೆ. ತಮಿಳಿನಲ್ಲಿ ವೀರಮ್ ನಂತರ ತಮ್ಮು ಆರ್ಯ ಜೊತೆ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ತಮಿಳು ತೆಲುಗಲ್ಲಿ ಒಳ್ಳೆಯ ಹೆಸರನ್ನು ಹೊಂದಿರುವ ತಮನ್ನ ಈಗ ಈ ಪಾತ್ರಕ್ಕೆ ಸೂಕ್ತ ಎಂದು ನಿರ್ಮಾಣ ಸಂಸ್ಥೆ ನಿರ್ಧಾರ ಮಾಡಿದ ಕಾರಣ ಅವಕಾಶ ತಮ್ಮು ಪಾಲಾಗಿದೆ.