Webdunia - Bharat's app for daily news and videos

Install App

ಆರ್ ಆರ್ ಆರ್ ತಂಡಕ್ಕೆ ಶುಭ ಕೋರದ ವಿಜಯ್: ದಳಪತಿ ಹೀಗ್ಯಾಕೆ?!

Webdunia
ಗುರುವಾರ, 16 ಮಾರ್ಚ್ 2023 (09:40 IST)
ಚೆನ್ನೈ: ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಮೊನ್ನೆಯಷ್ಟೇ ಆಸ್ಕರ್ ಪ್ರಶಸ್ತಿ ಪಡೆದಿದ್ದನ್ನು ಇಡೀ  ವಿಶ್ವವೇ ಸಂಭ್ರಮಿಸಿತ್ತು.

ಅದರಲ್ಲೂ ಭಾರತ ಚಿತ್ರರಂಗದ ಅನೇಕ ದಿಗ್ಗಜರು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿ ಚಿತ್ರತಂಡಕ್ಕೆ ಬೆಂಬಲ ನೀಡಿದ್ದರು. ಆದರೆ ದಳಪತಿ ವಿಜಯ್ ಮಾತ್ರ ಒಂದೇ ಒಂದು ಮಾತನಾಡಿರಲಿಲ್ಲ.

ಇದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ವಿಜಯ್ ಗೆ ಬಾಲಿವುಡ್ ನ ಪಠಾಣ್ ಸಿನಿಮಾವನ್ನು ಪ್ರಮೋಟ್ ಮಾಡಲು ಸಮಯವಿರುತ್ತದೆ. ಆದರೆ ನಮ್ಮದೇ ದಕ್ಷಿಣದ ಸಿನಿಮಾವೊಂದು ದೇಶಕ್ಕೆ ಮೊದಲ ಬಾರಿಗೆ ಆಸ್ಕರ್ ತಂದುಕೊಟ್ಟಿದ್ದನ್ನು ಸಂಭ್ರಮಿಸುವ ಉದಾರ ಮನಸ್ಸಿಲ್ಲ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ. ತೆಲುಗು ಸಿನಿಮಾ ರಂಗದಿಂದ ವಿಜಯ್ ಕೆಲವು ಸಮಯದಿಂದ ದೂರವೇ ಇದ್ದಾರೆ. ಅವರ ಸಿನಿಮಾಗಳನ್ನೂ ತೆಲುಗಿನಲ್ಲಿ ಪ್ರಮೋಟ್ ಕೂಡಾ ಮಾಡಲ್ಲ. ಹೀಗಾಗಿ ಈಗ ಆರ್ ಆರ್ ಆರ್ ಸಕ್ಸಸ್ ನ್ನು ಹೊಗಳುವ ಉದಾರ ಮನಸ್ಸು ತೋರಿಸಿಲ್ಲ. ಅಷ್ಟಕ್ಕೂ ವಿಜಯ್ ಗೆ ತೆಲುಗು ಸಿನಿಮಾ ಮೇಲೆ ಯಾಕೆ ಈ ಮುನಿಸು ಎಂದು ತಿಳಿದುಬಂದಿಲ್ಲ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments