Webdunia - Bharat's app for daily news and videos

Install App

ಶಿವರಾಜ್ ಕುಮಾರ್ ಹೊಗಳುತ್ತಾ ಎಡವಟ್ಟು ಮಾಡಿಕೊಂಡ ತೆಲುಗು ನಟ ಬಾಲಕೃಷ್ಣ

Webdunia
ಮಂಗಳವಾರ, 11 ಜುಲೈ 2017 (09:35 IST)
ಬೆಂಗಳೂರು: ತೆಲುಗು ಸ್ಟಾರ್ ನಟ ಬಾಲಕೃಷ್ಣ ಇತ್ತೀಚೆಗೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಅಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಮಾಡಿರುವ ಎಡವಟ್ಟು ಯಾರಿಗೂ ಗೊತ್ತೇ ಆಗಲಿಲ್ಲ.


ಶಿವಣ್ಣ ಮತ್ತು ಚಿತ್ರತಂಡದವರ ಜತೆ ವೇದಿಕೆ ಏರಿದ ಬಾಲಕೃಷ್ಣ ಹ್ಯಾಟ್ರಿಕ್ ಹೀರೋನನ್ನು ಕನ್ನಡದಲ್ಲೇ ಹೊಗಳಿದರು. ಕನ್ನಡ ಗೊತ್ತಿಲ್ಲದಿದ್ದರೂ, ಅದು ಹೇಗೋ ಕಷ್ಟಪಟ್ಟು ಕನ್ನಡದಲ್ಲಿ ಶಿವಣ್ಣ ಬಗ್ಗೆ ಹೊಗಳಿಕೆಯ ಡೈಲಾಗ್ ಬಿಟ್ಟ ಬಾಲಕೃಷ್ಣ ಮಾಡಿದ ತಪ್ಪು ಅಪಾರ್ಥ ಮಾಡಿತು.

ಶಿವರಾಜ್ ಕುಮಾರ್ ಅಭಿನಯದ ‘ಸಿಂಹದ ಮರಿ’ ಸಿನಿಮಾವನ್ನು ಉಲ್ಲೇಖಿಸಿ, ಶಿವಣ್ಣ ಸಿಂಹದ ಮರಿ ಎನ್ನುವ ಬದಲು ಸಿಂಹದ ‘ಮಾರಿ’ ಎಂದು ಬಿಟ್ಟರು. ಪಕ್ಕದಲ್ಲೇ ಇದ್ದವರೆಲ್ಲರೂ ನಗು ನಗುತ್ತಲೇ ತಲೆಯಾಡಿಸಿದರು. ಆದರೆ ಮರಿ ಎನ್ನುವ ಬದಲು ಶಿವರಾಜ್ ಕುಮಾರ್ ರನ್ನು ಮಾರಿ ಎಂದಿದ್ದು ಎಂತಹ ಎಡವಟ್ಟು ಎಂಬುದು ತೆಲುಗು ಸೂಪರ್ ಸ್ಟಾರ್ ಗೆ ಗೊತ್ತಾಗಲೇ ಇಲ್ಲ ಬಿಡಿ.

ಇದನ್ನೂ ಓದಿ.. ಪಾಪರ್ ಆದ ವಿತರಕರ ಜೇಬು ತುಂಬಲು ಮುಂದಾದ ಸಲ್ಮಾನ್ ಖಾನ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments