ಕನ್ನಡ ನಟಿ ತೇಜಸ್ವಿನಿ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ನಟಿಸುವಂತಹ ಅವಕಾಶಗಳನ್ನು ಪಡೆದುಕೊಂಡಿದ್ದಾಳೆ. ಆ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳನ್ನು ಪಡೆದಿದೆಯಂತೆ. ಇದರಲ್ಲಿ ಅತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಾಳಂತೆ. ಅಷ್ಟೊಂದು ಪ್ರಾಮುಖ್ಯತೆ ಹೊಂದಿದ್ದು, ಧೈರ್ಯಸ್ಥೆಯ ಪಾತ್ರಧಾರಿಯಾಗುತ್ತಿದ್ದಾಳೆ ತೇಜಸ್ವಿನಿ.
ಈವರೆಗೂ ಆಕೆಗೆ ತನ್ನ ತಾರ ಬದುಕಿನಲ್ಲಿ ಅಂತಹದೊಂದು ಪಾತ್ರ ಸಿಕ್ಕಿಲ್ಲವಂತೆ. ಈ ಚಿತ್ರ ಸಂಪೂರ್ಣವಾಗಿ ಆಕೆಯ ಸುತ್ತಲೇ ಸುತ್ತುತ್ತಿರುತ್ತದೆಯಂತೆ ಹಾಗಂತ ಮಾಧ್ಯಮಗಳಿಗೆ ಆಕೆ ತಿಳಿಸಿದ್ದಾಳೆ. ಇದರಲ್ಲಿ ಆಕೆಯ ಜೊತೆ ತೆಲುಗು ನಟ ಮನೀಶ್ ಅವರು ನಟಿಸುತ್ತಿದ್ದಾರೆ.
ನಿತ್ಯ ಜೊತೆ ಸತ್ಯ ಎನ್ನುವ ಶೀರ್ಷಿಕೆ ಹೊಂದಿರುವ ಈ ಚಿತ್ರವೂ ತೆಲುಗಿನಲ್ಲಿ ನಿತ್ಯ ವಿತ್ ಸತ್ಯ ಎನ್ನುವ ಹೆಸರನ್ನು ಪಡೆದಿದೆ. ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರದ ಕೆಲಸಗಳು ಇದೆ ತಿಂಗಳ ಕೊನೆಯಲ್ಲಿ ತನ್ನ ಕೆಲಸ ಆರಂಭ ಮಾಡಲಿದೆ. ತಮಿಳಿನಲ್ಲಿ ಸಹ ಸಿದ್ಧಪಡಿಸುವತ್ತ ಆ ಚಿತ್ರದ ನಿರ್ಮಾಪಕರು ಯೋಚಿಸಿದ್ದಾರಂತೆ. ಒಟ್ಟಾರೆ ಬಂಪರ್ ಅವಕಾಶ ಪಡೆದ ತೇಜಸ್ವಿನಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ.