Webdunia - Bharat's app for daily news and videos

Install App

ತಾಕತ್ತಿದ್ದರೆ ರಾಜಕೀಯಕ್ಕೆ ಬರಲಿ: ಕಮಲ್ ಹಾಸನ್ ಮೇಲೆ ಮುಗಿಬಿದ್ದ ಸಚಿವರು

Webdunia
ಮಂಗಳವಾರ, 18 ಜುಲೈ 2017 (11:06 IST)
ತಮಿಳುನಾಡಿನ ಆಡಳಿತಾರೂಢ ಅಣ್ಣಾಡಿಎಂಕೆ ಮತ್ತೆ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನ ಟಾರ್ಗೆಟ್ ಮಾಡಿದೆ. ಕಮಲ್ ಹಾಸನ್`ಗೆ ತಾಕತ್ತಿದ್ದರೆ ರಾಜಕೀಯಕ್ಕೆ ಬರಲಿ ಎಂದು ಹಣಕಾಸು ಸಚಿವ ಡಿ. ಜಯಕುಮಾರ್ ಬಹಿತಂಗ ಸವಾಲು ಹಾಕಿದ್ದಾರೆ.
 

ತಮಿಳುನಾಡಿನ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಮಲ್ ಹಾಸನ್ ಮಾಡಿದ್ದ ಆರೋಪದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಕಮಲ್ ಹಾಸನ್ ನಮ್ಮ ಮೇಲೆ ಕೆಸರೆರಚಿದರೆ ಸುಮ್ಮನಿರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇವೇಳೆ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಶ್ಲೀಲ ಬಟ್ಟೆ ಮತ್ತು ಪದ ಬಳಕೆಯಿಂದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ ಎಂದೂ ಸಹ ಕಿಡಿ ಕಾರಿದ್ದಾರೆ..

ಜಯಲಲಿತಾ ಬದುಕಿದ್ದಾಗ ಸರ್ಕಾರದ ವಿರುದ್ಧ ಸೊಲ್ಲೆತ್ತದ ಕಮಲ್ ಹಾಸನ್ ಈಗ ಮಾತನಾಡುತ್ತಿರುವುದೇಕೆ ಎಂದು ಜಯಕುಮಾರ್ ಪ್ರಶ್ನಿಸಿದ್ದಾರೆ.. ಈ ಮಧ್ಯೆ, ಕಮಲ್ ಹಾಸನ್ ಬೆಂಬಲಕ್ಕೆ ನಿಂತಿರುವ ಮಾಜಿ ಸಿಎಂ ಪನ್ನೀರ್ ಸೆಲ್ವಂ, ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ನಟನನ್ನ ಬೆದರಿಸುವುದನ್ನ ಬಿಟ್ಟು ಸೂಕ್ತ ಸಾಕ್ಷ್ಯಗಳನ್ನ ಮುಂದಿಡಬೇಕೆಂದು ಆಗ್ರಹಿಸಿದ್ದಾರೆ.

ಭಾನುವಾರ ಸಚಿವ ಎಸ್,ಕೆ. ವಲುಮಣಿ, ಭ್ರಷ್ಟಾಚಾರ ಾರೋಪ ಸಾಬೀತುಮಾಡುವಂತೆ ಕಮಲ್ ಹಾಸನ್`ಗೆ ಸವಾಲು ಹಾಕಿದ್ದರು. ಬಿಗ್ ಬಾಸ್`ನಲ್ಲಿ ಕೊಳಚೆ ಜನರಿಗಿಂತಲೂ ಅಶ್ಲೀಲ ಭಾಷೆ ಬಳಸುತ್ತಿರುವ ಹಿನ್ನೆಲೆಯಲ್ಲಿ ಬಿಗ್ ಬಾಸ್ ನಿರೂಪಕನ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬ ಸಚಿವ ಷನ್ಮುಗಂ ಆಗ್ರಹಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments