Webdunia - Bharat's app for daily news and videos

Install App

ಬಾಹುಬಲಿ ನಿರ್ದೇಶಕರ ಮೇಲೆ ತಮನ್ನಾ ಮುನಿಸು!

Webdunia
ಸೋಮವಾರ, 8 ಮೇ 2017 (11:06 IST)
ಹೈದರಾಬಾದ್: ಬಾಹುಬಲಿ 2 ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿರುವಾಗಲೇ ಅದರ ತೆರೆಯ ಹಿಂದಿನ ಒಂದೊಂದೇ ಕುತೂಹಲಕಾರಿ ವಿಷಯಗಳು ಹೊರಬೀಳುತ್ತಿವೆ.

 
ಮೊದಲ ಭಾಗದಲ್ಲಿ ಮಹೇಂದ್ರ ಬಾಹುಬಲಿಯ ಪ್ರೇಮಿಯಾಗಿ, ದಂಗೆಕೋರರ ಗುಂಪಿನ ನಾಯಕಿಯಾಗಿ ಪ್ರಮುಖ ಪಾತ್ರ ವಹಿಸಿದ್ದ ತಮನ್ನಾ ಎರಡನೇ ಭಾಗದಲ್ಲಿ 3-4 ದೃಶ್ಯಗಳಲ್ಲಷ್ಟೇ ಬಂದು ಹೋಗುತ್ತಾರೆ. ಅದೂ ಹೆಚ್ಚಿ ಸಂಭಾಷಣೆಯೂ ಇಲ್ಲದ ಪಾತ್ರ.

ಇದರಿಂದ ನಿರ್ದೇಶಕ ರಾಜಮೌಳಿ ಮೇಲೆ ತಮನ್ನಾ ಮುನಿಸಿಕೊಂಡಿದ್ದಾರೆಂದು ವರದಿಯಾಗಿದೆ. ಅಂದ ಹಾಗೆ ಬಾಹುಬಲಿ 2 ಚಿತ್ರಕ್ಕಾಗಿ ತಮನ್ನಾ ಕುದುರೆ ಸವಾರಿ, ಮಾರ್ಷಿಯಲ್ ಆರ್ಟ್ಸ್ ಕಲೆ ಕಲಿತುಕೊಂಡಿದ್ದರಂತೆ. ಅದನ್ನು ಸಿನಿಮಾ ಬಿಡುಗಡೆಗೂ ಮೊದಲೇ ತನಗೆ ಈ ಭಾಗದಲ್ಲಿ ಪ್ರಮುಖ ಪಾತ್ರವಿದೆ ಎಂದು ಹೇಳಿಕೊಂಡಿದ್ದರು. ಅದರಂತೆ ಚಿತ್ರೀಕರಣ ಕೂಡಾ ನಡೆದಿತ್ತಂತೆ.

ಆದರೆ ಸಿನಿಮಾ ಬಿಡುಗಡೆಯಾಗುವಾಗ ತಮನ್ನಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ಅದಕ್ಕೆ ಕಾರಣ ರಾಜಮೌಳಿ ಎಡಿಟಿಂಗ್ ಮಾಡುವಾಗ ಅಷ್ಟೊಂದು ಉತ್ತಮವಾಗಿ ಬಾರದ ದೃಶ್ಯಗಳನ್ನು ಕಟ್ ಮಾಡಿದ್ದರು. ದುರದೃಷ್ಟವಶಾತ್ ಹೆಚ್ಚಿನ ದೃಶ್ಯಗಳು ತಮನ್ನಾರದ್ದಾಗಿತ್ತು. ಆದರೆ ಚಿತ್ರ ನೋಡಿದ ತಮನ್ನಾಗೆ ಭಾರೀ ಬೇಸರವಾಗಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments