Webdunia - Bharat's app for daily news and videos

Install App

ಗೆಲುವಿಗಾಗಿ ಹೋರಾಟ ನಡಿಸಿರುವ ಟಾಲಿವುಡ್ ಮಹೇಶ್ ಬಾಬು

Webdunia
ಮಂಗಳವಾರ, 28 ಅಕ್ಟೋಬರ್ 2014 (12:29 IST)
ಕೆಲವರ ಅದೃಷ್ಟ ತುಂಬಾ ಚೆನ್ನಾಗಿರುತ್ತದೆ. ಅದಕ್ಕೆ ಕಾರಣ ಅವರ ಬ್ಯಾಕ್ ಗ್ರೌಂಡ್ ಆಗಿರಬಹುದು ಅಥವಾ ಅವರ ಪ್ರಭಾವ ಸಹ ಇರಬಹುದು. ಇಲ್ಲಿ ನಾವು ಹೇಳುತ್ತಿರುವುದು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಗ್ಗೆ. 
 
ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 1  ನೆನೊಕ್ಕಡೇನೆ  ಮತ್ತು ಆಗಡು ಚಿತ್ರಗಳು ಮಕಾಡೆ ಮಲಗಿ ನಿರ್ಮಾಪಕರು ಮತ್ತು ಹಂಚಿಕೆದಾರರು ದಣಿದು ಹೋಗುವಂತೆ ಮಾಡಿದ್ದರೂ ಮಹೇಶ್ ಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಆದ್ರೆ  ನಿರಂತರವಾಗಿ ಎರಡು ಬಾರಿ ಆದ ಸೋಲಿನ ಬಗ್ಗೆ ಅರಿವಿರುವ ಈ ಹೀರೋ ತನ್ನ ಹೊಸ ಚಿತ್ರಗಳ ಆಯ್ಕೆಯಲ್ಲಿ ಎಚ್ಚರವಹಿಸುವುದಕ್ಕೆ ಆದ್ಯತೆ ನೀಡಿದ್ದಾರೆ. 
 
ಕೊರಟಾಲ್ ಶಿವ ಅವರ ನಿರ್ದೇಶನದಲ್ಲಿ ಈಗ ನಟಿಸಲು ಸಿದ್ಧತೆ ನಡಿಸಿರುವ ಮಹೇಶ್ ಈಗ ಮತ್ತೊಂದು ಚಿತ್ರದಲ್ಲಿ ನಟಿಸಲು ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದನ್ನು ಪೂರಿ ಜಗನ್ನಾಥ್ ಅವರು ನಿರ್ದೇಶಿಸುತ್ತಿದ್ದಾರೆ. ಇದು ಪೂರಿ ಜಗನ್ನಾಥ್ ಮತ್ತು ಮಹೇಶ್ ಜೋಡಿಯ ಮೂರನೇ ಚಿತ್ರವಾಗಿದೆ. ಈ ಚಿತ್ರ ಮುಂದಿನ ವರ್ಷ ಎಪ್ರಿಲ್ ತಿಂಗಳಲ್ಲಿ ಸೆಟ್ಟೇರುತ್ತಿದೆ.
 
ಈ ಚಿತ್ರ ಪೂರ್ಣ ಆಗುವಷ್ಟರಲ್ಲಿ ಅಂದರೆ ಮುಂದಿನ ವರ್ಷದ ಕೊನೆಯಲ್ಲಿ ಸಿತಮ್ಮವಾಕಿಟ್ಲೋ ಸಿರಮಲ್ಲೇ ಚಟ್ಟು ನಿರ್ದೇಶಕ ಶ್ರೀಕಾಂತ್ ಅದ್ದಾಲ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಕೊರಟಾಳ , ಪೂರಿ ಜಗನ್ನಾಥ್ ಅವರ ಸಿನಿಮಾಗಳನ್ನು  ಮಾಸ್‌ಗಾಗಿ ಮತ್ತು ಶ್ರೀಕಾಂತ್ ಅದ್ದಾಲ ಅವರ ಚಿತ್ರ ಫೀಲ್ ಗುಡ್ ಇರುವ ಅಂಶ ಇರುವುದಕ್ಕೆ ಆದ್ಯತೆ ನೀಡಿರುವುದಾಗಿ ತಿಳಿದು ಬಂದಿದೆ. 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments