ಕೆನಡಾ ಮೂಲದ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಗೆ ಈಗ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಸಹಿತ ಅವಕಾಶಗಳ ಸುರಿಮಳೆ. ಈಗ ಆಕೆ ಒಂದು ನಿರ್ಧಾರಕ್ಕೆ ಬಂದಿದ್ದಾಳೆ. ಈ ನಿರ್ಧಾರದಿಂದ ಇಡೀ ಭಾರತೀಯ ಸಿನಿಮಾರಂಗ ಆಶ್ಚರ್ಯ ಚಕಿತವಾಗಿದೆ. ಸನ್ನಿ ಯಾವಾಗಿನಿಂದ ಬಾಲಿವುಡ್ ಗೆ ಎಂಟ್ರಿ ಆದಳೋ ಅಂದಿನಿಂದ ಆಕೆಯು ತನ್ನ ಭಿನ್ನ ಆಟಗಳಿಂದ ಬಾಲಿವುಡ್ ಮಂದಿಯನ್ನು ತಲ್ಲಣ ಗೊಳಿಸುತ್ತಿದ್ದಾಳೆ.
ಈಗ ಮತ್ತೊಂದು ರೀತಿಯಲ್ಲಿ ಭಾರತೀಯ ಚಿತ್ರಮಂದಿಯನ್ನು ತನ್ನತ್ತ ಆಕರ್ಷಿಸಿದ್ದಾಳೆ ಈ ಮಾದಕ ಚೆಲುವೆ. ಈಗ ಆಕೆ ಹದಿನೈದು ದಿನಗಳ ಕಾಲ ಭಾರತದಲ್ಲಿ ತೀರ್ಥಯಾತ್ರೆ ಮಾಡುವ ಉದ್ದೇಶ ಹೊಂದಿದ್ದಾಳಂತೆ. ಹಾಗಂತ ಖುದ್ದು ಸನ್ನಿಲಿಯೋನ್ ಹೇಳಿದ್ದಾಳೆ. ಭಾರತದಲ್ಲಿರುವ ಪುಣ್ಯ ಕ್ಷೇತ್ರಗಳಿಗೆ ಹೋಗಿ ಅಲ್ಲಿರುವ ದೇವರನ್ನು ಸಂದರ್ಶಿಸಿ ಬರುವ ಆಶಯ ಹೊಂದಿದ್ದಾಳೆ ಹಾಗೂ ಅದನ್ನು ಕಾರ್ಯಗತ ಮಾಡುವುದರತ್ತ ತನ್ನ ಚಿತ್ತ ನೆಟ್ಟಿದ್ದಾಳೆ.
ಆ ಪುಣ್ಯಕ್ಷೇತ್ರಗಳ ಮಹತ್ವವನ್ನು ತಿಳಿಯುವ ಆಸಕ್ತಿ ಆಕೆಗಿದೆಯಂತೆ. ಅವಳ ಜೊತೆ ಪತಿ ಡೆನಿಯಲ್ ವೆಬರ್ ಸಹಿತ ಇರುತ್ತಾರಂತೆ. ಯಾವಾಗ ಆಕೆ ತೀರ್ಥ ಕ್ಷೇತ್ರದ ಸಂದರ್ಶನದ ಬಗ್ಗೆ ಹೇಳಿದ್ದಾಳೋ ಆಗಿನಿಂದ ಅವಳಿಗೆ ಅಡ್ಡಿ ಉಂಟಾಗಿದೆಯಂತೆ ಕೆಲವು ವ್ಯಕ್ತಿಗಳಿಂದ. ಇದಕ್ಕಾಗಿ ಆಕೆ ಪ್ರೈವೇಟ್ ಸೆಕ್ಯೂರಿಟಿಯನ್ನು ಹೊಂದುವುದಕ್ಕೆ ಆದ್ಯತೆ ನೀಡಿದ್ದಾಳೆ. ಆದರೆ ಸನ್ನಿ ತೀರ್ಥಯಾತ್ರೆಗೋ ಪಬ್ಲಿಸಿಟಿಗೂ ಸಂಬಂಧವಿದೆ ಎನ್ನುವುದು ಬಾಲಿವುಡ್ ಮಂದಿ ಹರಡಿಸಿರುವ ಸುದ್ದಿ. ಆದರೆ ಈಕೆ ಮಾತ್ರ ಅವ್ಯಾವುದಕ್ಕೂ ಜಗ್ಗದೆ, ತಾನು ಭಾರತಕ್ಕೆ ಬಂದ ದಿನದಿಂದ ಈವರೆಗೂ ಒಂದೇ ಒಂದು ದೇವಸ್ಥಾನಕ್ಕೂ ಹೋಗಿಲ್ಲ, ಇದ್ಯಾವುದು ಪ್ರಚಾರಕ್ಕೆಂದು ಮಾಡುತ್ತಿರುವ ಸಂಗತಿಯಲ್ಲ ,ಈಗ ತನ್ನ ಪತಿಯ ಜೊತೆ ತೀರ್ಥಯಾತ್ರೆ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾಳೆ. ಆದರೆ ಈಕೆ ತೆಗೆದುಕೊಂಡ ನಿರ್ಧಾರ ಜಾರಿಯಾದರೆ ನಿಶ್ಚಿತವಾಗಿ ಬಾಲಿವುಡ್ ಮಂದಿಯಲ್ಲಿ ಗೊಂದಲ ಉಂಟಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.