Webdunia - Bharat's app for daily news and videos

Install App

ರೇಪ್‌ ಹೆಚ್ಚಾಗಲು ಸನ್ನಿ ಜಾಹೀರಾತು ಕಾರಣವಂತೆ: ಸಿಪಿಐ ನಾಯಕನ ಎಡವಟ್ಟು ಮಾತು

Webdunia
ಶುಕ್ರವಾರ, 4 ಸೆಪ್ಟಂಬರ್ 2015 (09:37 IST)
ದೇಶದಲ್ಲಿ ನಡೆಯುತ್ತಿರೋ ಮಹಿಳೆಯರ ಮೇಲಿನ ದೌರ್ಜನ್ಯದಿಂದಾಗಿ ಇಡೀ ದೇಶವೇ ತಲೆತಗ್ಗಿಸುವಂತಾದೆ. ಈಗ ಇಂತಹ ಘಟನೆಗಳಿಗೆ ಟಿವಿಗಳಲ್ಲಿ ಪ್ರಸಾರವಾಗ್ತಿರೋ ತಾರೆಯರ ಜಾಹೀರಾತುಗಳೇ ಕಾರಣ ಅಂತ ಸಿಪಿಐ ಹಿರಿಯ ನಾಯಕ ಅತುಲ್ ಅಂಜನ್ ಗುಡುಗಿದ್ದಾರೆ.  ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ರೇಪ್ ಕೇಸ್ ಗಳು ಹೆಚ್ಚಾಗಲು ಜಾಹೀರಾತುಗಳು ಅರ್ಧ ಕಾರಣ ಅದ್ರಲ್ಲೂ ಇತ್ತೀಚೆಗೆ ಕಾಂಡೋಮ್ ಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಬಿತ್ತರಿಸುತ್ತಿರುವ ಜಾಹೀರಾತಿನಿಂದ ಇಂತಹ ಘಟನೆಗಳು ದೇಶದಲ್ಲಿ ಹೆಚ್ಚಾಗುತ್ತಿದೆ ಅಂತ ಅತುಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವುದು ಹೊಸದೇನಲ್ಲ. ಇದೀಗ ಅತುಲ್ ಈ ರೀತಿಯ ಹೇಳಿಕೆ ನೀಡಿದ್ದು ದೇಶದಾದ್ಯಂತ ವ್ಯಾಪಕ ಚರ್ಚೆಯಾಗ್ತಿದೆ. ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಳ ಕಾಂಡೋಮ್ ಜಾಹೀರಾತಿನಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲಿದೆ ಎಂದು ಅತುಲ್ ಹೇಳಿಕೆ ನೀಡಿದ್ದಾರೆ. ಜನಪ್ರಿಯ ತಾರೆಯರು ಕಾಂಡೋಮ್ ಜಾಹೀರಾತುಗಳಲ್ಲಿ  ಕಾಣಿಸಿಕೊಂಡ್ರೆ ಜನರು ತಪ್ಪು ದಾರಿಗಿಳಿಯುತ್ತಾರೆ, ಜೊತೆಗೆ ಈ ಜಾಹೀರಾತು ಅತ್ಯಾಚಾರ ಪ್ರಕರಣಗಳಿಗೂ ದಾರಿ ಮಾಡಿಕೊಡುತ್ತೆ ಎಂದಿದ್ದಾರೆಯ 
 
ಇನ್ನು ನೀಲಿತಾರೆ ಸನ್ನಿ ಲಿಯೋನ್ ವಿರುದ್ಧ ಗರಂ ಆಗಿರೋದು ಇದೇನು ಮೊದಲಲ್ಲ. ಈ ಮೊದಲು ಶ್ರೀ ರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದಿದ್ರು. ಒಟ್ನಲ್ಲಿ ಇಂತಹ ಹೇಳಿಕೆಗಳಿಂದ ಸನ್ನಿಗೆ ನಷ್ಟವೇನು ಆದಂತೆ ಕಾಣ್ತಿಲ್ಲ. ಇಂತಹ ವ್ಯಾಪಕ ಚರ್ಚೆಗಳಿಂದ ಸನ್ನಿ ಬಾಲಿವುಡ್ ನಲ್ಲಿ ಮತ್ತಷ್ಟು ಹಾಟ್ ಕೇಕ್ ಆಗಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?