ಚಿಂತಿಸ ಬೇಡಿ ಪ್ರಿಯ ಕಿಚ್ಚ ಅಭಿಮಾನಿಗಳೇ. ಸುದೀಪ್ ಈಗ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಅವರ ಆರೋಗ್ಯ ಸುಸ್ಥಿರವಾಗಿದೆ. ಅವರ ವೃತ್ತಿಯ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಸುದೀಪ್ ಅವರ ಚಿತ್ರ ರನ್ನ ಬಿಡುಗಡೆ ಆಯಿತು. ಅಪರೂಪದ ಯಶಸ್ಸು ಗಳಿಸಿದ ಚಿತ್ರದ ಸಾಲಿಗೆ ಅದು ಸೇರ್ಪಡೆ ಆಗಿದೆ. ಇದರ ನಡುವೆ ಸುದೀಪ್ ಅವರು ಶಿವಮೊಗ್ಗ ಕೆಪಿಎಲ್ ತಂಡವನ್ನು ಕೊಂಡಿದ್ದಾರೆ. ವೃತ್ತಿಯಲ್ಲಿ ಎಷ್ಟೇ ನಿಪುಣತೆ ಇದ್ದರೂ ಸಹಿತ ಆರೋಗ್ಯದ ಬಗ್ಗೆಯೂ ಸಹಿತ ಹೆಚ್ಚು ಆದ್ಯತೆ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ತೊಂದರೆ ತಪ್ಪಿದ್ದಲ್ಲ.
ಇತ್ತೀಚೆಗೆ ಅವರು ಅಸಿಡಿಟಿಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸೇರಿದ ಮಾರನೆಯ ದಿನವೇ ಅವರು ಡಿಸ್ಚಾರ್ಜ್ ಆಗಿ ಮನೆಗೆ ಬಂದರು. ಸತತವಾಗಿ ಮೈಗ್ರೇನ್ ಮತ್ತು ಬೆನ್ನು ನೋವಿನಿಂದ ಕಳೆದ 20ವರ್ಷಗಳಿಂದ ಬಳಲುತ್ತಿರುವ ಸುದೀಪ್ ಅವರು ಈಗ ಎರಡು ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಬೇಗ ಸುಧಾರಿಸಲಿ. ಫಿಟ್ ಅಂಡ್ ಫೈನ್ ಆಗಿ ಮತ್ತಷ್ಟು ಉತ್ತಮ ಚಿತ್ರಗಳನ್ನು ಕಿಚ್ಚ ನೀಡಲಿ.