ಮೆಜೆಸ್ಟಿಕ್ ಚಿತ್ರದ ಆಫರ್ ನನಗೆ ಬಂದಿತ್ತು. ಆದರೆ, ಈ ಅವಕಾಶವನ್ನ ದರ್ಶನ್`ಗೆ ಕೊಡಲು ಸೂಚಿಸಿದ್ದೆ ಎಂದು 5 ವರ್ಷಗಳ ಹಿಂದೆ ಟಿವಿ ಚಾನಲ್`ನ ಸಂದರ್ಶನದಲ್ಲಿ ಸುದೀಪ್ ಹೇಳಿದ್ದ ಮಾತು ಇದೀಗ ದರ್ಶನ್ ಕೋಪಕ್ಕೆ ಕಾರಣವಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ದರ್ಶನ್ ನಾವಿಬ್ಬರೂ ಇನ್ಮುಂದೆ ಸ್ನೇಹಿತರಲ್ಲ ಎಂದು ಹೇಳಿದ್ದರು.
ಆದರೆ, ಟ್ವಿಟ್ ಬಗ್ಗೆ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತುಮಕೂರಿನಲ್ಲಿ ಹೆಬ್ಬುಲಿ ಚಿತ್ರ ಪ್ರಚಾರಕ್ಕೆ ಗಾಯತ್ರಿ ಚಿತ್ರಮಂದಿರಕ್ಕೆ ಆಗಮಿಸಿದ್ದ ಸುದೀಪ್ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡದೇ ತಲೆ ತಿರುಗಿಸಿಕೊಂಡು ಹೊರಟೇ ಹೋದರು.
ನಾನಿಲ್ಲಿ ಚಿತ್ರ ಪ್ರಚಾರಕ್ಕೆ ಬಂದಿದ್ದೇನೆ. ಹೆಬ್ಬುಲಿ ಚಿತ್ರ ಸಕ್ಸಸ್ ಆಗಿದೆ. ಎಲ್ಲ ಕೆಂದ್ರಗಳಿಗೂ ಭೇಟಿ ಆಗದಿದ್ದರೂ ಆದಷ್ಟು ಕಡೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.