Select Your Language

Notifications

webdunia
webdunia
webdunia
webdunia

ಮತ್ತೆ ಒಂದಾಗೋಣ ಬಾ

ಮತ್ತೆ  ಒಂದಾಗೋಣ  ಬಾ
, ಶನಿವಾರ, 21 ನವೆಂಬರ್ 2015 (11:45 IST)
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್  ಮಾಣಿಕ್ಯ  ಚಿತ್ರದಲ್ಲಿ ತಂದೆ-ಮಗನ ಪಾತ್ರದಲ್ಲಿ ಪ್ರೇಕ್ಷಕರನ್ನ ರಂಜಿಸಿದ್ದು ನಿಮಗೆ ಗೊತ್ತೇ ಇದೆ. ಇದೀಗ ಇವರಿಬ್ಬರೂ ಮತ್ತೆ ಸಿಲ್ವರ್ ಸ್ಕ್ರೀ‌ನ್‌ನಲ್ಲಿ ಒಂದಾಗಿ ನಟಿಸ್ತಾರ ಅನ್ನೋ ಸುದ್ದಿ ಈಗ ಗಾಂಧಿನಗರದಲ್ಲಿ ಹರಿದಾಡ್ತಿದೆ. ಸದ್ಯ ಗಾಂಧಿನಗರದಲ್ಲಿ ಇದೇ ದೊಡ್ಡ ಬೇಕ್ರಿಂಗ್ ನ್ಯೂಸ್. ಇದೇ ಸ್ಯಾಂಡಲ್ ವುಡ್ ನ ಮಂದಿಯ ಪ್ರಕಾರ ರವಿಮಾಮ ಮತ್ತು ಕಿಚ್ಚ ಜೋಡಿ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲಿದ್ದಾರೆ.
 

 
ಬಾಲಿವುಡ್ ನಲ್ಲಿ ಸಕ್ಸಸ್ ಕಂಡ ಓ ಮೈ ಗಾಡ್ ಚಿತ್ರವ  ಕನ್ನಡದಲ್ಲಿ ರಿಮೇಕ್ ಆಗೋ ಸುದ್ದಿ ಈ ಹಿಂದೆಯೇ ಲೀಕ್ ಆಗಿತ್ತು. ಎಂ.ಡಿ ಶ್ರೀಧರ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಉಪೇಂದ್ರ ಜೊತೆಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಸ್ವಲ್ಪ ದಿನದ ನಂತ್ರ ಮತ್ತೆ  ಉಪ್ಪಿ ಜಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಕಾಣಿಸಿಕೊಂಡಿತ್ತು. ಇದೀಗ ಬಂದಿರೋ ಸುದ್ದಿಯ ಪ್ರಕಾರ ಚಿತ್ರತಂಡವೇ ಬದಲಾಗಿರೋದು ಗೊತ್ತಾಗಿದೆ. ಕನ್ನಡದ  ಓ ಮೈ ಗಾಡ್ ಚಿತ್ರದ ಅವತರಣಿಕೆಯನ್ನ ನಂದಕಿಶೋರ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗ್ತಿದೆ. 
 
ಹಿಂದಿಯಲ್ಲಿ ಪರೇಶ್ ರಾವಲ್ ಮಾಡಿದ ಪಾತ್ರವನ್ನು ರವಿಚಂದ್ರನ್ ನಿರ್ವಹಿಸಲಿದ್ದು, ಅಕ್ಷಯ್ ಕುಮಾರ್ ರೋಲ್‌ನಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ನಟಿಸಲಿದ್ದಾರೆ ಅನ್ತಿದೆ ಗಾಂಧಿನಗರ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್  ಮಾಣಿಕ್ಯ  ಚಿತ್ರದಲ್ಲಿ ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡು ಪ್ರೇಕ್ಷಕರಿಂದ ಸಖತ್ ಚಪ್ಪಾಳ ಗಿಟ್ಟಿಸಿದ್ರು. ಈ ಇಬ್ಬರೂ ಸ್ಟಾರ್ ಗಳೂ ಜೊತೆಯಾಗಿ ನಟಿಸೋದ್ರ ಬಗ್ಗೆ ಸುದ್ದಿ ಪಕ್ಕಾ ಆಗ್ದಿದ್ರೂ ಜನರು ಮಾತ್ರ ಇಬ್ಬರು ಮತ್ತೊಂದು ಒಳ್ಳೇ ಸಿನಿಮಾ ಕೊಡುವಂತಾಗಲಿ ಅನ್ತಿದ್ದಾರೆ. 

Share this Story:

Follow Webdunia kannada