ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾಗಳಲ್ಲಿ ಒಂದು ಜಿಗರ್ ಥಂಡ. ಸುದೀಪ್ ಅವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಈಗಾಗಲೇ ನಾನಾ ಕಾರಣಕ್ಕಾಗಿ ಗಾಂಧೀನಗರದಲ್ಲಿ ಸುದ್ದಿಯಲ್ಲಿದೆ. ಸಿನಿಮಾ ಯಾವಾಗ ನಮ್ಮ ಕಣ್ಮುಂದೆ ಬರುತ್ತೆ ಅಂತಾ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.
ಅಂದ್ಹಾಗೆ ಜಿಗರ್ ಥಂಡಾ ಸಿನಿಮಾದ ನಿರ್ದೇಶಕರು ಶಿವಗಣೇಶ್. ಅವರು ಮೂಲತಃ ಚೆನ್ನೈ ನವರು. ಜಿಗರ್ ಥಂಡ ಸಿನಿಮಾ ಶಿವಗಣೇಶ್ ಅವರ ಮೂರನೇ ಕನ್ನಡ ಸಿನಿಮಾ. ಕನ್ನಡದಲ್ಲಿ ಸುದೀಪ್ ಅವರಂತಹ ನಟ ನಿರ್ಮಾಣ ಮಾಡುತ್ತಿರುವ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರೋದಕ್ಕೆಶಿವಗಣೇಶ್ ಅವರು ತುಂಬಾ ಖುಷಿಯಾಗಿದ್ದಾರೆ.ಅಲ್ಲದೇ ನಾನು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರೋದು ಸುದೀಪ್ ಅವರಿಗಾಗಿ. ಅವರೇ ನನ್ನ ಗುರುಗಳು ಅಂತಾ ಹೇಳಿದ್ದಾರೆ.
ಜಿಗರ್ ಥಂಡ್ ಸಿನಿಮಾ ತುಂಬಾ ಒಳ್ಳೇ ಸಿನಿಮಾ.ನಾನು ಸಿನಿಮಾದ ಬಗ್ಗೆ ತುಂಬಾನೇ ಖುಶಿಯಾಗಿದ್ದೇನೆ.ಈ ಸಿನಿಮಾ ತುಂಬಾ ಚೆನ್ನಾಗಿ ಬರೋದಕ್ಕೆ ಕಾರಣ ಸುದೀಪ್ ಸರ್. ಅವರು ನಮಗೆಲ್ಲಾ ಗುರುಗಳಿದ್ದಂತೆ ಶಿವಗಣೇಶ್ ಹೇಳಿದ್ದಾರೆ. ಸಿನಿಮಾ ಮಾಡೋ ಬಗ್ಗೆ ನಾನು ಹಾಗೂ ಸುದೀಪ್ ಅವರು ಮೊದಲು ಮೀಟ್ ಆದಾಗ ಸಾಕಷ್ಟು ಭಯವಿತ್ತು. ಅವರೇ ನನಗೆ ಧೈರ್ಯ ತುಂಬಿದ್ರು ಅಂತಾ ಶಿವಗಣೇಶ್ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.