Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ ಕ್ಯಾಂಪೇನ್ ಬಗ್ಗೆ ಕಿಚ್ಚ ಸುದೀಪ್ ಆಸಕ್ತಿ..

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ ಕ್ಯಾಂಪೇನ್ ಬಗ್ಗೆ ಕಿಚ್ಚ ಸುದೀಪ್ ಆಸಕ್ತಿ..
, ಮಂಗಳವಾರ, 4 ನವೆಂಬರ್ 2014 (11:09 IST)
ಇತ್ತೀಚಿಗೆ ಕಸ ಗುಡಿಸುವ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಬರೀತಾ ಇದ್ದೀವಿ. ಬೇರೆಯವರು ಮಾಡಿದರೆ ಅದು ಸುದ್ದಿ ಆಗಲ್ಲ ಆದರೆ ಸಿನಿಮಾ ಮಂದಿ ಮಾಡಿದರೆ ಆ ಸಂಗತಿ ಸುದ್ದಿ ಆಗುತ್ತದೆ. ಎರಡು ವಾರಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಸ ಗುಡಿಸಿ ಜಗತ್ತಿಗೆ ತಾವು ಕಸ ಗುಡಿಸ ಬಲ್ಲೆವು ಎಂದು ತೋರಿಸಿ ಕೊಟ್ಟರು.


 
ಅದಾದ ಬಳಿಕ ಅಕ್ಕಿನೇನಿ ನಾಗಾರ್ಜುನ ಮತ್ತು ಕುಟುಂಬದವರು ಸಹ ಕಸ ಗುಡಿಸಿ ಊರನ್ನು  ಸ್ವಚ್ಛ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈಗ ಕನ್ನಡದ ನಟ ಕಿಚ್ಚ ಸುದೀಪ್ ಅವರು ಈ ಕೆಲ್ಸಕ್ಕೆ ಸಿದ್ಧತೆ ನಡಿಸಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಹು ಕನಸಿನ ಸ್ವಚ್ಚ ಭಾರತದ ಕನಸನ್ನು ನನಸು ಮಾಡುವ ಉದ್ದೇಶಕ್ಕೆ ತಮ್ಮ ಕೈ  ಜೋಡಿಸಿದ್ದಾರೆ ಕನ್ನಡದ ನಟ. ಸ್ವಚ್ಚ್ ಭಾರತ ಅಭಿಯಾನ ಕ್ಯಾಂಪೇನ್ ನಲ್ಲಿ ತಾವು ಸಹಿತ ಭಾಗವಾಗುವುದಕ್ಕೆ ಪೂರಕ ಸಿದ್ಧತೆ ನಡಿಸಿದ್ದಾರೆ ಸುದೀಪ್. ಈ ಬಗ್ಗೆ ಅವರು ಸ್ಪಷ್ಟ ಪಡಿಸುತ್ತಾ.. 
 
ಇದೊಂದು ಉತ್ತಮ ಕೆಲಸ ಕನ್ನಡ ಚಿತ್ರರಂಗದವರೆಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಿ ಉತ್ತಮ ಕೆಲ್ಸಕ್ಕೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ. ನಮ್ಮ ಜನರು ಸಹಿತ ನಮ್ಮ ಈ ಕಾರ್ಯಕ್ಕೆ ಕೈ ಜೋಡಿಸುವ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ ಕಿಚ್ಚ. ಅವರ ಆಶಯದಂತೆ ಆಗಲಿ. 

Share this Story:

Follow Webdunia kannada