Webdunia - Bharat's app for daily news and videos

Install App

’ಮಾಸ್ತಿಗುಡಿ ದುರಂತ’ದ ಬಗ್ಗೆ ರವಿವರ್ಮ ಮೌನ ಮಾತಾದಾಗ

Webdunia
ಮಂಗಳವಾರ, 27 ಡಿಸೆಂಬರ್ 2016 (12:35 IST)
ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಸಾವಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಟ್ ಮಾಸ್ಟರ್ ರವಿವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದರು. ಒಂದೂವರೆ ತಿಂಗಳು ರಾಮನಗರದ ಜೈಲಿನಲ್ಲಿ ಕಳೆದುಬಂದಿರುವ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
 
ಈ ಘಟನೆಯಲ್ಲಿ ನನ್ನದೇನು ತಪ್ಪಿಲ್ಲ. ಇಡೇ ಚಿತ್ರದ ಪರಿಕಲ್ಪನೆ ಅದಾಗಿತ್ತು. ನಾನು ಇದುವರೆಗೂ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 270ಕ್ಕೂ ಚಿತ್ರಗಳಿಗೆ ಸ್ಟಂಟ್ ಮಾಡಿದ್ದೇನೆ. ಯಾವತ್ತೂ ಈ ರೀತಿ ಆಗಿರಲಿಲ್ಲ. ಮಾಸ್ತಿಗುಡಿ ದುರಂತ ನನ್ನ ಹಣೆಯಲ್ಲಿ ಬರೆದಿತ್ತು ಅನ್ನಿಸುತ್ತದೆ. ನಾನು ಈಗ ಏನು ಹೇಳಿದರೂ ಅದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ದೇವರು ಮತ್ತು ಶಿರಡಿ ಸಾಯಿಬಾಬಾ ಮೇಲೆ ಭಾರ ಹಾಕಿದ್ದೇನೆ ಅಷ್ಟೆ ಎಂದಿದ್ದಾರೆ.
 
ಚಿತ್ರೀಕರಣಕ್ಕೂ ಮುನ್ನ ಏನೋ ಸಂಭವಿಸಲಿದೆ ಅಂತ ಅನ್ನಿಸುತ್ತಿತ್ತು. ಈ ಬಗ್ಗೆ ನನಗೆ ತುಂಬಾ ಬೇಸರ ಇದೆ. ನನ್ನನು ನಾನೇ ಸಾಕಷ್ಟು ಬೈದುಕೊಂಡಿದ್ದೇನೆ. ಆದರೂ ಏನು ಮಾಡುವುದು ಎಲ್ಲಾ ನನ್ನ ಹಣೆಬರಹ. ಚಿತ್ರತಂಡಕ್ಕೆ ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
 
ಅವರಿಗೆ ಈಜುಬರಲ್ಲ ಡ್ಯೂಪ್ ಬಳಸೋಣ ಎಂದಿದ್ದೆ. ಆದರೆ ಅವರ ಗುರು (ದುನಿಯಾ ವಿಜಯ್) ಈ ಸ್ಟಂಟ್ ಸ್ವತಃ ಮಾಡಬೇಕೆಂದು ಪಟ್ಟುಹಿಡಿದರು. ವಿಧಿಯಿಲ್ಲದೆ ಚಿತ್ರತಂಡ ಒಪ್ಪಿಕೊಂಡಿತ್ತು. ಕೆಳಗಡೆ ಎರಡು ಟ್ಯೂಬ್ ಹಾಕೋಣ ಎಂದು ಹೇಳಿದ್ದಕ್ಕೆ, ಅದರಿಂದ ಪೆಟ್ಟಾಗುತ್ತೆ ಅಂತೇಳಿ ಹೆಲಿಕಾಪ್ಟರ್ ಪೈಲಟ್ ಬೇಡ ಎಂದಿದ್ದರು. 
 
ಎರಡು ಸೈಕಲ್ ಬೋಟ್‌ಗಳು,  ಒಂದು ಮೋಟಾರು ಬೋಟು, ಐದು ತೆಪ್ಪಗಳಿದ್ದವು. ಇಷ್ಟೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೇವಲ 100 ಮೀಟರ್ ಅಂತರದಲ್ಲಿದ್ದ ವಿಧಿಯನ್ನು ಗೆಲ್ಲಕ್ಕೆ ಆಗಲಿಲ್ಲ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

ಮುಂದಿನ ಸುದ್ದಿ
Show comments