Webdunia - Bharat's app for daily news and videos

Install App

ಮರಳಿ ಗೂಡಿಗೆ ಬಂದ ಸಮಾಜ ಮುಖಿ ಶಿವರಾಮಣ್ಣ

Webdunia
ಶುಕ್ರವಾರ, 26 ಡಿಸೆಂಬರ್ 2014 (09:38 IST)
ಕಳೆದ 55  ವರ್ಷಗಳಿಂದ ಬಣ್ಣದ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಶಿವರಾಮಣ್ಣನಿಗೆ ಈಗ ಎಪ್ಪತ್ತು + ವಯೋಮಿತಿ. ಆದರು ಬತ್ತದ ಉತ್ಸಾಹದ ಅವರನ್ನು ಸದಾ ಚಟುವಟಿಕೆಯಿಂದ ಇಟ್ಟಿದೆ. ಇತ್ತೀಚಿಗೆ ಅವರು ಸುಮಾರು 50 ದಿನಗಳ ಕಾಲ  ಯುಎಸ್ ಮತ್ತು  ಯುಕೆ  ದೇಶಗಳಿಗೆ ಹೋಗಿ ಬಂದರು. 
ಅದರಲ್ಲೇನು ವಿಶೇಷತೆ ಅಂತೀರಾ ? ಇದೆ ಅವರು ಸುಮ್ಮನೆ ಕಾಲ ಕಲಿಯಲು ಅಲ್ಲಿಗೆ ಹೋಗದೆ ಕಿವುಡ ಮತ್ತು ಮೂಕರ ಶಾಲೆಯಾದ ಸಮರ್ಥನಂದ ವಿದ್ಯಾರ್ಥಿಗಳ ಜೊತೆ ಹೋಗಿ ಬಂದರು. ಅವರ ಜೊತೆ ವಿದೇಶ ಸುತ್ತಿ ಬಂದವರಲ್ಲಿ ನಾಲ್ಕು ಅಂಧರು ಮತ್ತು ನಾಲ್ಕು ಕಿವುಡ ಮತ್ತು ಮೂಕ ಮಕ್ಕಳು. ದೇವರು ದೇವತಾರ್ಚನೆಯ ವಿಷಯದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಶಿವರಾಮಣ್ಣ ಸಮಾಜಮುಖಿಯಾಗಿಯೂ ಎಲ್ಲರ ಮನ ಗೆದ್ದಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿ ಫಾರ್ನಿಯ, ವಾಷಿಂಗ್ಟನ್, ಬಾಸ್ಕೊ ಸೇರಿದಂತೆ ಅನೇಕ ಕಡೆಗಳಲ್ಲಿ ಅವರು ಮಕ್ಕಳೊಂದಿಗೆ ಸಾಸ್ಕೃತಿಕ ಕಾರ್ಯಕ್ರಮ ನೀಡಿ ಬಂದಿದ್ದಾರೆ. 
 
ಅವರ ಜೊತೆ ವೆಂಕಟೇಶ ಮೂರ್ತಿ,ವೈಕೆ ಮುದ್ದು ಕೃಷ್ಣ, ಡಾ. ಪುಟ್ಟ ಸ್ವಾಮಿ ಮುಂತಾದವರು ಮಾತಿನ ರಸಗವಳ ನೀಡಿ ಬಂದಿದ್ದಾರೆ. ಪ್ರಸ್ತುತ ಶಬರಿಮಲೆಗೆ ಹೋಗಲು ಸಿದ್ಧ ಆಗಿರುವ ಗುರುಸ್ವಾಮಿ ಶಿವರಾಮಣ್ಣ ತಮ್ಮ ಜೀವಿತಾವಧಿಯಲ್ಲಿ ಸುಮಾರು 75  ಬಾರಿ ಶಬರಿ ಮಲೈಗೆ ಹೋಗಿ ಬಂದಿದ್ದಾರೆ. ಅವರ 50  ದಿನಗಳ ಯಾತ್ರೆಯು ಪುಸ್ತಕ ರೂಪದಲ್ಲಿ   ಬರಲಿದೆ. ಅದಕ್ಕಾಗಿ ಸ್ವಲ್ಪ ಕಾಲ ಕಾಯ ಬೇಕು ನಾವು ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments